ಮುಝಫ್ಫರ್ ನಗರ ಗಲಭೆಯ 20 ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

Prasthutha|

ಲಖ್ನೋ: 2013 ರ ಮುಝಫ್ಫರ್ ನಗರ ಗಲಭೆಯ 20 ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯ ಖುಲಾಸೆಗೊಳಿಸಿದೆ.
ಮುಝಫ್ಫರ್ ನಗರದ ಲಂಕ್ ಗ್ರಾಮದಲ್ಲಿ ಹಲವಾರು ಜನರ ಕೊಲೆ ಮತ್ತು ದರೋಡೆ ಪ್ರಕರಣದ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಲಾಗಿದೆ. ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕಮಲಪತಿ ಅವರು ತೀರ್ಪು ನೀಡಿದ್ದಾರೆ.

- Advertisement -

ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಧೀಶರು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಮೀರತ್ ಮತ್ತು ಶಾಮ್ಲಿಯಲ್ಲಿ ನಡೆದ ಗಲಭೆಯಲ್ಲಿ ಕನಿಷ್ಠ 60 ಜನರು ಕೊಲ್ಲಲ್ಪಟ್ಟು ಸಾವಿರಾರು ಜನರು ತಮ್ಮ ಗ್ರಾಮದಿಂದ ವಲಸೆ ಹೋಗಿದ್ದರು.

Join Whatsapp