ಹುರಿಯತ್ ಕಾನ್ಫರೆನ್ಸ್ ಕಚೇರಿಯನ್ನು ಮುಟ್ಟುಗೋಲು ಹಾಕಿದ ಎನ್ಐಎ

Prasthutha|

ಹೊಸದಿಲ್ಲಿ: ಹುರಿಯತ್ ಕಾನ್ಫರೆನ್ಸ್ ಸಂಘಟನೆಯ ಶ್ರೀನಗರದಲ್ಲಿರುವ ಕಚೇರಿಯನ್ನು ರಾಷ್ಟ್ರೀಯಾ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಭಾನುವಾರ ಮುಟ್ಟುಗೋಲು ಹಾಕಿದ್ದಾರೆ.
ಕಚೇರಿಯ ಹೊರಗಡೆ ಗೋಡೆಗೆ ಅಧಿಕಾರಿಗಳು ನೋಟಿಸ್ ಅಂಟಿಸಿದ್ದು, “ವಿಚಾರಣೆ ಎದುರಿಸುತ್ತಿರುವ ಹುರಿಯತ್ನ ನಾಯಕರಾದ ನಯೀಮ್ ಹಾಗೂ ಅಹ್ಮದ್ ಖಾನ್ ಒಡೆತನದ ಈ ಕಟ್ಟಡವನ್ನು ಜಪ್ತಿ ಮಾಡಲಾಗಿದೆ. ದೆಹಲಿಯ ಪಟಿಯಾಲಾ ಹೌಸ್, ಎನ್ಐಎ ವಿಶೇಷ ನ್ಯಾಯಾಲಯ 2023ರ ಜ.27ರಂದು ಹೊರಡಿಸಿರುವ ಆದೇಶಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗಿದೆ” ಎಂದು ಸೂಚಿಸಿದೆ.

- Advertisement -

26 ಪ್ರತ್ಯೇಕವಾದಿ ಸಂಘಟನೆಗಳ ಒಕ್ಕೂಟ ಸಂಘಟನೆಯಾಗಿರುವ ಹುರಿಯತ್, ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದೆ ಎನ್ನುವ ಆರೋಪದಲ್ಲಿ 2019ರಿಂದ ಈ ಸಂಘಟನೆಯ ಕಚೇರಿಯನ್ನು ಮುಚ್ಚಲಾಗಿದೆ.

Join Whatsapp