ಮುಂದಿನ ಮುಖ್ಯಮಂತ್ರಿ ನಾನೇ | ಸಿಎಂ ರೇಸ್ ನಲ್ಲಿ ನಾನಿದ್ದೇನೆ ಎಂದ ಉಮೇಶ್ ಕತ್ತಿ !

Prasthutha|

ಬೆಳಗಾವಿ : ರಾಜ್ಯದಲ್ಲಿ  ನಾಯಕತ್ವ ಬದಲಾವಣೆಯ ಚರ್ಚೆ ತೀವ್ರಗೊಳ್ಳುತ್ತಿರುವ ಮಧ್ಯೆಯೇ ಮುಖ್ಯಮಂತ್ರಿ ಸ್ಥಾನದ ರೇಸ್ ನಲ್ಲಿ ತಾವು ಮುಂಚೂಣಿಯಲ್ಲಿರುವುದಾಗಿ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಹಿರಿತನವಿದೆ. ಕಳಂಕ ರಹಿತನಾಗಿದ್ದೇನೆ. ಅದೃಷ್ಟ ಒಲಿದರೆ ಹಾಗೂ ಪಕ್ಷದ ಮುಖಂಡರು ತೀರ್ಮಾನಿಸಿದರೆ ಸಿಎಂ ಜವಾಬ್ದಾರಿ ನಿರ್ವಹಿಸುವ ಆಸೆ ಇಟ್ಟುಕೊಂಡಿದ್ದೇನೆ ಎಂದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಭೇಟಿ ನೀಡಿ ವಾಪಸ್  ಬಂದ ನಂತರ ಅವರು ರಾಜೀನಾಮೆ ನೀಡುತ್ತಾರೆಂಬ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಊಹಾಪೋಹಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಉಮೇಶ್ ಕತ್ತಿಯಿಂದ ಈ ಹೇಳಿಕೆ ಹೊರಬಿದ್ದಿದೆ.

Join Whatsapp