ಪ್ರೀತಿಸಿ ಮದುವೆಯಾದ ನವಜೋಡಿ; ಠಾಣೆಯಲ್ಲಿ ಬೇರ್ಪಟ್ಟ ಪತಿ,ಪತ್ನಿ; ಅಳುತ್ತಾ ಕಣ್ಣೀರಿಟ್ಟ ಪತಿ

Prasthutha|

ಮೈಸೂರು: ಪ್ರೀತಿಸಿ ಮದುವೆಯಾದ ನವಜೋಡಿಯನ್ನು ಬೇರ್ಪಡಿಸಿ ಪತಿಯ ಮುಂದೆಯೇ ಪೊಲೀಸರು ಪತ್ನಿಯನ್ನು ಕರೆದುಕೊಂಡ ಹೋದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.

- Advertisement -

ಮುಹಮ್ಮದ್ ಅಖಿಬ್ ಹಾಗೂ ಒಡಿಶಾ ಮೂಲದ ಪ್ರಿಯತ್ ರೌತ್ ಪ್ರೀತಿಸಿ ಮದುವೆಯಾಗಿದ್ದರು. ಈ ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದ ಪ್ರಿಯತ್ ರೌತ್ ಕುಟುಂಬಸ್ಥರು ಮೈಸೂರಿನಲ್ಲಿ ಮಗಳು ಮದುವೆಯಾದ ವಿಷಯ ತಿಳಿದು ಪುತ್ರಿ ಕಾಣೆಯಾಗಿದ್ದಾಳೆಂದು ಒಡಿಶಾ ಪೋಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಒಡಿಶಾ ಪೊಲೀಸರು, ನಿನ್ನೆ ಮೈಸೂರಿಗೆ ಬಂದಿದ್ದು, ಉದಯಗಿರಿ ಪೊಲೀಸ್ ಠಾಣೆಗೆ ಜೋಡಿಯನ್ನು ಕರೆಸಲಾಗಿತ್ತು. ಕೊನೆಗೆ ಯುವತಿಯನ್ನು ತಮ್ಮ ಜೊತೆ ಕರೆದುಕೊಂಡು ಹೋಗಲು ನಿರ್ಧರಿಸಿದ ಪೊಲೀಸರು ಆಕೆಯನ್ನು ಕರೆದುಕೊಂಡು ಹೋಗಲು ಮುಂದಾಗುತ್ತಿದ್ದಂತೆ, ನಮ್ಮಿಬ್ಬರನ್ನು ಬೇರ್ಪಡಿಸಬೇಡಿ ಎಂದು ಪತಿ ಅಖಿಬ್ ಅಳುತ್ತಾ ಕಣ್ಣೀರು ಹಾಕಿದ್ದಾನೆ.

- Advertisement -

ಆತ ಅಳುತ್ತಿದ್ದರೂ ಒಡಿಶಾ ಪೊಲೀಸರು ಯುವತಿಯನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ. ಜೋಡಿ ಬೇರ್ಪಡುವ ವೇಳೆ ನೆರೆದಿದ್ದವರ ಕಣ್ಣಾಲಿಗಳು ತೇವಗೊಂಡಿದ್ದವು. ಅಖಿಬ್ ಮತ್ತು ಪ್ರಿಯತ್ ರೌತ್ ಮಧ್ಯೆ ಹೇಗೆ ಪ್ರೇಮಾಂಕುರವಾಗಿತ್ತು ಎಂಬುವುದು ತಿಳಿದು ಬಂದಿಲ್ಲ. ಇದೀಗ ಅಖಿಬ್ ತನ್ನ ಪತ್ನಿಯನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದ್ದಾನೆ.



Join Whatsapp