ಉತ್ತರ ಪ್ರದೇಶ : ಗಂಗಾ ನದಿಯಲ್ಲಿ ತೇಲಿ ಬಂದ ಪುಟ್ಟ ಹೆಣ್ಣು ಮಗು!

Prasthutha|

ಗಾಝಿಪುರ : ಉತ್ತರ ಪ್ರದೇಶದ ಗಾಝಿಪುರ ಜಿಲ್ಲೆಯ ಗಂಗಾ ನದಿ ದಡದಲ್ಲಿ 22 ದಿನಗಳ ಹೆಣ್ಣು ಮಗುವೊಂದು ಮರದ ಪೆಟ್ಟಿಗೆಯೊಂದರಲ್ಲಿ ತೇಲಿ ಬಂದ ಘಟನೆ ನಡೆದಿದೆ.

- Advertisement -

ಮಗುವಿನ ಸಂಪೂರ್ಣ ಜವಾಬ್ದಾರಿ ಸರಕಾರ ವಹಿಸಿಕೊಳ್ಳುವುದಾಗಿ ಮುಖ್ಯಮಂತ್ರಿ ಆದಿತ್ಯನಾಥ್‌ ಪ್ರಕಟಿಸಿದ್ದಾರೆ.

ದಾದ್ರಿ ಘಾಟ್‌ ಬಳಿ ಪೆಟ್ಟಿಗೆಯಲ್ಲಿ ಮಗು ಅಳುತ್ತಿರುವ ಸದ್ದು ಕೇಳಿದ ದೋಣಿ ಚಾಲಕನೊಬ್ಬ, ಪೆಟ್ಟಿಗೆಯನ್ನು ತೆಗೆದು ನೋಡಿದಾಗ ಮಗು ಪತ್ತೆಯಾಗಿದೆ. ಪೆಟ್ಟಿಗೆಯೊಳಗೆ ಮಗುವಿನ ಜಾತಕ ಮತ್ತು  

- Advertisement -

ದೇವರ ಫೋಟೊ ಇಡಲಾಗಿತ್ತು. ಮಗುವನ್ನು ದುಪಟ್ಟಾದಲ್ಲಿ ಸುತ್ತಲಾಗಿತ್ತು. ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮಗುವನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಆಶಾ ಜ್ಯೋತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಮಗುವಿಗೆ ಗಂಗಾ ಎಂದು ನಾಮಕರಣ ಮಾಡಲಾಗಿದೆ.

Join Whatsapp