ನೇಜಾರು ಕೊಲೆ ಪ್ರಕರಣ: ಕೊಲೆಗಾರನನ್ನು ಶೀಘ್ರ ಬಂಧಿಸಿ ಜಿಲ್ಲೆಯ ಜನರ ಆತಂಕವನ್ನು ದೂರ ಮಾಡಲು WIM ಆಗ್ರಹ

Prasthutha|

ಉಡುಪಿ: ಜಿಲ್ಲೆಯ ನೇಜಾರು ಎಂಬಲ್ಲಿ ಮೊನ್ನೆ ನಡೆದ ಒಂದೇ ಕುಟುಂಬದ ನಾಲ್ಕು ಜನರ ಭಯಾನಕ ಹತ್ಯೆ ಘಟನೆಯಿಂದ ಜಿಲ್ಲೆಯ ಜನ ಆಘಾತಕ್ಕೊಳಗಾಗಿದ್ದಾರೆ, ಕೊಲೆ ನಡೆದು ಎರಡು ದಿನ ಕಳೆದರೂ ಜಿಲ್ಲೆಯ ಜನರ ಆತಂಕ ದೂರವಾಗಿಲ್ಲ, ವಿಶೇಷವಾಗಿ ಮಹಿಳೆಯರಲ್ಲಿ ಭಯದ ವಾತಾವರಣವಿದೆ.ಕೊಲೆಗಾರನನ್ನು ಶೀಘ್ರ ಬಂಧಿಸಿ ಜಿಲ್ಲೆಯ ಜನರ ಆತಂಕವನ್ನು ದೂರ ಮಾಡಿ ಎಂದು WIM ಆಗ್ರಹಿಸಿದೆ.

- Advertisement -


ಘಟನೆ ನಡೆದು 48 ಗಂಟೆಗಳು ಕಳೆದರೂ ಕೊಲೆಗಾರನ ಬಂಧನ ವಾಗಲಿಲ್ಲ ಮತ್ತು ಯಾವುದೇ ಸುಳಿವು ಸಹ ಸಿಕ್ಕಿಲ್ಲ, ಮಾನ್ಯ ಉಸ್ತುವಾರಿ ಸಚಿವರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ.ಪೋಲಿಸ್ ಇಲಾಖೆ ಸಮಗ್ರ ತನಿಖೆ ನಡೆಸಿ ಕೊಲೆಗಾರನನ್ನು ಶೀಘ್ರ ಬಂಧಿಸಿ ಕಠಿಣ ಕಾನೂನು ಶಿಕ್ಷೆಗೊಳಪಡಿಸುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಮತ್ತು ಜಿಲ್ಲೆಯ ಜನರ ಆತಂಕವನ್ನು ದೂರ ಮಾಡಬೇಕು.
ಹಾಗೂ ಮುಂಬರುವ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮವನ್ನು ಕೈಗೊಳ್ಳುವ ಮೂಲಕ ಮಹಿಳೆಯರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ವಿಮೆನ್ ಇಂಡಿಯಾ ಮೂಮೆಂಟ್ ಉಡುಪಿ ಜಿಲ್ಲಾಧ್ಯಕ್ಷರಾಗಿರುವ ನಾಝಿಯಾ ನಸ್ರುಲ್ಲ ರವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

Join Whatsapp