ಮೋದಿಗೆ ನೆಹರೂ ಈಕ್ವಲ್ ಅಲ್ವೇ ಅಲ್ಲ ಎಂದ ಛಲವಾದಿ ನಾರಾಯಣಸ್ವಾಮಿ

Prasthutha|

ಬೆಂಗಳೂರು: ಯಾವುದೇ ರೀತಿಯಲ್ಲೂ ಮೋದಿಗೆ ನೆಹರೂ ಈಕ್ವಲ್ ಅಲ್ಲವೇ ಅಲ್ಲ. ಈ ಸತ್ಯ ಸಿದ್ದರಾಮಯ್ಯ ಬಹಳ ತಡವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

- Advertisement -

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಕಾಲದ ಭಾರತ ಬೇರೆ, ನೆಹರೂ ಕಾಲದ ಭಾರತವೇ ಬೇರೆ. ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡಲು ಕಾರಣ ಮೋದಿ. ಆರೆಸ್ಸೆಸ್ ನವರು ಈ ದೇಶದವರೇ ಅಲ್ಲ ಅಂದರೆ ಸಿದ್ದರಾಮಯ್ಯ ಯಾವ ದೇಶದವರು? ಸಿದ್ದರಾಮಯ್ಯ ಅವರಿಗೆ  ಅಧಿಕಾರ ಕಳೆದುಕೊಂಡ ಮೇಲೆ ಮತಿಭ್ರಮಣೆ ಆದಂತಿದೆ. ಇತ್ತೀಚೆಗೆ ಅವರು ಮತಿಭ್ರಮಣೆ ಆದಂತೆ ಮಾತಾಡ್ತಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯಗೆ ದಲಿತರ ಮೇಲೆ ವಿಶ್ವಾಸವಿಲ್ಲ. ದಲಿತರ ಬಗ್ಗೆ ಹಗುರವಾಗಿ ಮಾತನಾಡ್ತಾರೆ ಎಂದು ಆರೋಪಿಸಿದ ಅವರು. ಸಣ್ಣತನದ ಮಾತುಗಳನ್ನು ನಿಲ್ಲಿಸಿ ಗೌರವ ಉಳಿಸಿಕೊಳ್ಳಿ ಎಂದು ಹೇಳಿದ್ದಾರೆ.

Join Whatsapp