GST ಬರೆ ಎಳೆದಿರುವ ಮೋದಿ ಸರ್ಕಾರ ಬಡವರ ಪಾಲಿಗೆ ಹೆಗಲೇರಿದ ಶನಿ: ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ಕೇಂದ್ರದ ತೆರಿಗೆ ಸರ್ಕಾರ ಬಡವರ ತಿನ್ನುವ ಅನ್ನಕ್ಕೂ ಕಲ್ಲು ಹಾಕುತ್ತಿದೆ. ಮೋದಿ ಸರ್ಕಾರದಲ್ಲಿ ಬಡವರು ಬದುಕುವ ಅವಕಾಶವೇ ಇಲ್ಲ. ಬಡವರು ಬಳಸುವ ವಸ್ತುಗಳಿಗೂ GST ಬರೆ ಎಳೆದಿರುವ ಮೋದಿ ಸರ್ಕಾರ ಬಡವರ ಪಾಲಿಗೆ ಹೆಗಲೇರಿದ ಶನಿಯಾಗಿದೆ. GST ಮೂಲಕ ಸುಲಿಗೆ ಮಾಡುತ್ತಿರುವ ಮೋದಿಯವರೆ, ನಿಮ್ಮ 56 ಇಂಚಿನ ಎದೆಯಲ್ಲಿ ಬಡವರ ಬಗ್ಗೆ ಕರುಣೆಯಿಲ್ಲವೆ? ಎಂದು ಎಐಸಿಸಿ ಕಾರ್ಯದರ್ಶಿ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

- Advertisement -

ಹಾಲು, ಮೊಸರು ಮಜ್ಜಿಗೆಗೂ ಸಾಲದೆಂಬಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಮೇಲೂ GST ವಕ್ರದೃಷ್ಟಿ ಬಿದ್ದಿದೆ. ಕೇಂದ್ರ ಸರ್ಕಾರಕ್ಕೆ ಹಗಲು ದರೋಡೆ ಮಾಡಲು GST ಒಂದು ಅಸ್ತ್ರವಷ್ಟೆ. ಇದೇನಾ ಮೋದಿಯವರ ಅಚ್ಛೆದಿನ್.? ಮೋದಿಯವರೆ, ಬಡವರು ತಿನ್ನುವ ಅನ್ನಕ್ಕೂ ತೆರಿಗೆ ಹಾಕುವ ನಿಮ್ಮ ಸರ್ಕಾರ ಅದ್ಯಾವ ಸೀಮೆಯ ಬಡವರ ಪರ ಸರ್ಕಾರ.? ಎಂದು ಫೇಸ್ ಬುಕ್ ನಲ್ಲಿ ಪ್ರಶ್ನಿಸಿದ್ದಾರೆ.

Join Whatsapp