ಮೈಸೂರು ಜೆಡಿಎಸ್ ಅಭ್ಯರ್ಥಿ ಒಬ್ಬ ಕಿಡ್ನಿ ಮಾರಾಟಗಾರ ಎಂದ ಸಚಿವ ಎಸ್.ಟಿ.ಸೋಮಶೇಖರ್ !

Prasthutha|

ಮೈಸೂರು: ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಓರ್ವ ಕಿಡ್ನಿ ಮಾರಾಟಗಾರ ಎಂದು ಸಚಿವ ಎಸ್.ಟಿ,ಸೋಮಶೇಖರ್ ಹೇಳಿದ್ದಾರೆ. ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಸೋಮಶೇಕರ್ , ಸಿ.ಎನ್.ಮಂಜೇಗೌಡ ಕಿಡ್ನಿ‌ ಮಾರಾಟದಲ್ಲಿ ನಂಬರ್ ಒನ್ ಎಂದು ಆರೋಪಿಸಿದ್ದಾರೆ.

- Advertisement -

ಮಂಜೇಗೌಡ ಒಬ್ಬ ಕಿಡ್ನಿ ಮಾರಾಟಗಾರನಾಗಿದ್ದು, ಒಂದೇ ಸೈಟನ್ನು ನಾಲ್ಕು ಜನರಿಗೆ ಮಾರಾಟ ಮಾಡಿದ ಮೋಸಗಾರ . ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಮೈಸೂರು – ಚಾಮರಾಜನಗರ ಜನರಿಗೆ ಮಾಡಿದ ಅವಮಾನ ಎಂದು ಸೋಮಶೇಕರ್ ಹೇಳಿದ್ದಾರೆ.

ಅಲ್ಲದೇ ಬೆಂಗಳೂರು ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ವಾಗ್ದಾಳಿ ನಡೆಸಿರುವ ಸೋಮಶೇಕರ್ ಬರೋಬ್ಬರಿ 40 ಕೇಸ್ ದಾಖಲಾಗಿರುವವನ್ನು ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಘೋಷಿಸಿದೆ. ಆತ 1700 ಕೋಟಿ ಒಡೆಯ ಎಂದು ತೋರಿಸಿಕೊಂಡಿದ್ದಾನೆ ಎಂದು ಹೇಳಿದರು.

Join Whatsapp