ಮೈಸೂರು: ನಲವತ್ತು ದಿನದ ಮಗು ಅಪಹರಿಸಿದ ಐವರ ಬಂಧನ

Prasthutha|

ಮೈಸೂರು: ಜೋಪಡಿಯಲ್ಲಿ ತಾಯಿಯೊಂದಿಗೆ ಮಲಗಿದ್ದ ನಲವತ್ತು ದಿನದ ಗಂಡು ಮಗುವನ್ನು ಅಪಹರಿಸಿದ ಘಟನೆ ಹಿನಕಲ್‌ ರಿಂಗ್ ರಸ್ತೆ ಬಳಿ‌ನಡೆದಿದ್ದು, ಈ ಸಂಬಂಧ ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

- Advertisement -

ಹೂಟಗಳ್ಳಿ ನಿವಾಸಿ ಮಂಜುನಾಥ್, ನಾಗವಾಲ ಗ್ರಾಮದ ಇಂದ್ರಕುಮಾರ್‌, ಸುಪ್ರಿಯಾ, ವಿಜಯಲಕ್ಷ್ಮಿ, ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಡಾಬರಹಳ್ಳಿಯ ಕುಮಾರ್‌ ಬಂಧಿತರು.

ಬಿಹಾರದ ಅಲೆಮಾರಿ ಕುಟುಂಬವೊಂದು ಹಿನಕಲ್‌ ರಿಂಗ್ ರಸ್ತೆ ಬಳಿ ಜೋಪಡಿಯಲ್ಲಿ ವಾಸ್ತವ್ಯವಿದೆ. ತಾಯಿ ರಾಮಡಲ್ಲಿ ದೇವಿಯು ತನ್ನ ಮಗನೊಂದಿಗೆ ಅದರಲ್ಲಿ ಮಲಗಿದ್ದು, ಬುಧವಾರ ಮುಂಜಾನೆ 3ರ ಸುಮಾರಿಗೆ ಅಪರಿಚಿತರು ಮಗುವನ್ನು ಅಪಹರಿಸಿದ್ದರು. ಈ ಬಗ್ಗೆ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

- Advertisement -

ಪ್ರಕರಣದ ಬೆನ್ನುಹತ್ತಿದ ಪೊಲೀಸರು ನಗರದ ಹೊರವಲಯದಲ್ಲಿ ಮಂಜುನಾಥ್‌ನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದರು. ಆರೋಪಿಗಳು ಮಗುವನ್ನು ನಾಗವಾಲದಲ್ಲಿರುವ ಇಂದ್ರಕುಮಾರ್‌ ಮನೆಯಲ್ಲಿ ಇರಿಸಿರುವುದು ತಿಳಿಯಿತು. ಅಲ್ಲಿ ಆತನ ಪತ್ನಿ ಹಾಗೂ ತಂಗಿ ಮಗುವನ್ನು ನೋಡಿಕೊಳ್ಳುತ್ತಿದ್ದರು. ಆರೋಪಿಗಳಿಗೆ ಬೆಂಗಳೂರು ಮೂಲದಿಂದ ಅಪಹರಣಕ್ಕೆ ಹಣ ಸಂದಾಯವಾಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಜಾಲವನ್ನು ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Join Whatsapp