ನನ್ನ ಹೆಸರು ಸಾವರ್ಕರ್ ಅಲ್ಲ, ನಾನು ಕ್ಷಮೆ ಕೇಳುವುದಿಲ್ಲ: ರಾಹುಲ್ ಗಾಂಧಿ ಪುನರುಚ್ಚಾರ

Prasthutha|

ನವದೆಹಲಿ: ಕ್ಷಮೆ ಕೇಳಲು ನನ್ನ ಹೆಸರು ಸಾವರ್ಕರ್ ಅಲ್ಲ ಎಂದು ಸಂಸತ್ ಸದಸ್ಯತ್ವದಿಂದ ಅನರ್ಹರಾದ ವಿಷಯದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.

- Advertisement -


ಸಂಸತ್ತಿನಲ್ಲಿ ನನ್ನ ಮುಂದಿನ ಭಾಷಣಕ್ಕೆ ಪ್ರಧಾನಿ ಮೋದಿಯವರು ಹೆದರಿದ್ದಾರೆ. ಅದಕ್ಕೆ ಇದೆಲ್ಲ ಆಗಿದೆ ಎಂದೂ ರಾಹುಲ್ ಗಾಂಧಿ ಹೇಳಿದ್ದಾರೆ.
“ನಾನು ಪ್ರಧಾನಿ ಮೋದಿಯವರ ಕಣ್ಣಿನಲ್ಲಿ ಭಯ ನೋಡುತ್ತಿದ್ದೇನೆ. ನನ್ನ ಮುಂದಿನ ಭಾಷಣಕ್ಕೆ ಹೆದರಿ ಅವರು ಇದನ್ನೆಲ್ಲ ಮಾಡಿಸಿದ್ದಾರೆ” ಎಂದು ರಾಹುಲ್ ಗಾಂಧಿ ನೇರವಾಗಿ ಆಪಾದಿಸಿದ್ದಾರೆ.


ನನ್ನ ಲಂಡನ್ ಮಾತಿನ ಬಗ್ಗೆ ಪ್ರತಿಕ್ರಿಯಿಸಲು ಸಭಾಪತಿ ಬಳಿ ನಾನು ಸಮಯ ಕೇಳಿದ್ದೆ, ಆದರೆ ನೀಡಲೇ ಇಲ್ಲ ಎಂದೂ ರಾಹುಲ್ ಗಾಂಧಿ ಹೇಳಿದರು. ಈ ದೇಶದ ಪ್ರಜಾಪ್ರಭುತ್ವಕ್ಕಾಗಿ, ಸತ್ಯಕ್ಕಾಗಿ ನಾನು ಮುಂದೆಯೂ ಹೋರಾಡುತ್ತೇನೆ ಎಂದೂ ಅವರು ಹೇಳಿದರು.
ಬಿಜೆಪಿಯ 6 ಜನ ಸೇರಿ 32 ನಾಯಕರು ಜನಪ್ರತಿನಿಧಿಯಾಗಿದ್ದಾಗಲೇ ಅನರ್ಹಗೊಂಡಿದ್ದಾರೆ, ಇವರೊಬ್ಬರೇನಲ್ಲ ಎಂದು ಕೇಂದ್ರ ಮಂತ್ರಿ ರವಿಶಂಕರ್ ಪ್ರಸಾದ್ ತಿರುಗೆಟು ನೀಡಿದ್ದಾರೆ.

Join Whatsapp