ಮುತಾಲಿಕ್,ಕಾಳಿಸ್ವಾಮಿ ಮಂಡ್ಯಕ್ಕೆ ಕಾಲಿಟ್ರೆ ಎಚ್ಚರಿಕೆ : ರೈತ,ದಲಿತ ಸಂಘಟನೆಯಿಂದ ಖಡಕ್ ವಾರ್ನಿಂಗ್

Prasthutha|

ಮಂಡ್ಯ :  ರಾಜ್ಯದ ಸ್ವಾಸ್ಥ್ಯವನ್ನು ಹಾಳುಗೆಡವುವ ಮುತಾಲಿಕ್ ಮತ್ತು  ಕಾಳಿಸ್ವಾಮಿ ಮಂಡ್ಯಕ್ಕೆ ಕಾಲಿಡಬಾರದು ಎಂದು ರೈತ, ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

- Advertisement -

ರಿಷಿಕುಮಾರ ಸ್ವಾಮಿಯ ಪಾದೆಯಾತ್ರೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಮಾತಾಡಿದ ಮುಖಂಡರು “ವೈದಿಕ ಸಂಸ್ಕ್ರತಿಯ ಹೇರಿಕೆಗೆ ಮಂಡ್ಯದ ಮಣ್ಣನ್ನು ಬಿಟ್ಟುಕೊಡುವುದಿಲ್ಲ.  ಕೇಸರಿ ಕೋಮುವಾದಗಳು ಭಾರತಕ್ಕೆ ಅಂಟಿಕೊಂಡ ಕ್ಯಾನ್ಸರ್ ಗಳು. ಆ ಗಡ್ಡೆಯನ್ನು ಬುಡಸಮೇತ ಕೀಳುವಂತಹ ಕೆಲಸವನ್ನು ಬುಡಸಮೇತ ಕಿತ್ತೊಗೆಯುವ ಕಾರ್ಯವನ್ನು ಮಂಡ್ಯ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು ಮಾಡುತ್ತಾರೆ. ಮುತಾಲಿಕ್ ಮತ್ತು ಕಾಳಿಸ್ವಾಮಿ ಇಬ್ಬರೂ ಸಮಾಜದಲ್ಲಿ ಶಾಂತಿ ಕದಡುವ ಕೋಮು ಕ್ರಿಮಿಗಳು. ಅಂತವರು ಮಂಡ್ಯಕ್ಕೆ ಕಾಲಿಡಬಾರದು ಎಂದು ಎಚ್ಚರಿಸಿದ್ದಾರೆ.



Join Whatsapp