ಸಿದ್ದರಾಮಯ್ಯನವರಿಗೆ ಇರುವ ಗಟ್ಟಿತನ ಬಿಜೆಪಿಯವರಿಗಿಲ್ಲ: ಮುತಾಲಿಕ್

Prasthutha|

► ಸೆಕ್ಯುಲರ್ ಆಗಲು ಹೊರಟ ಬಿಜೆಪಿ

- Advertisement -

ಬೆಂಗಳೂರು: ಕಾಂಗ್ರೆಸ್ ನಾಯಕ ಸಿದ್ದರಾಮಯ್ಯನವರಿಗೆ ಇರುವ ಗಟ್ಟಿತನ ಬಿಜೆಪಿಯವರಿಗಿಲ್ಲ. ಬಿಜೆಪಿಯವರು ಕೂಡ ಇತ್ತೀಚೆಗೆ ಮುಸ್ಲಿಂ ಪರ ಒಲವು ತೋರಿಸುತ್ತಿದ್ದಾರೇನೋ ಎಂದು ಅನ್ನಿಸುತ್ತಿದೆ ಶ್ರೀರಾಮ ಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.


ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಮುಸ್ಲಿಮರಿಗಾಗಿಯೇ ಇರುವವರು. ನಾಳೆ ಅವರ ಮಕ್ಕಳು, ಮೊಮ್ಮಕ್ಕಳು ಮುಸ್ಲಿಮರಾಗುತ್ತಾರೆ ಎಂಬುದು ಈಗ ಅವರಿಗೆ ಗೊತ್ತಾಗುತ್ತಿಲ್ಲ. ಮುಸ್ಲಿಮ್ ತುಷ್ಟೀಕರಣದಿಂದ ಅವರು ಅಧಿಕಾರ ದಾಹ ತೀರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

- Advertisement -


ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರಲ್ಲಿರುವ ಗಟ್ಟಿತನ ಇಂದು ಬಿಜೆಪಿಯವರಲ್ಲಿ ಕಾಣುತ್ತಿಲ್ಲ. ಬಾಬಾಬುಡನ್ ಗಿರಿಗೆ ಅರ್ಚಕರ ನೇಮಕಕ್ಕೆ ನೂರೆಂಟೆ ಕಾರಣಗಳನ್ನು ಸರ್ಕಾರ ನೀಡುತ್ತಿದೆ. ಇದು ಸರಿಯಲ್ಲ, ಕೂಡಲೇ ನೇಮಿಸಬೇಕು ಎಂದು ಹೇಳಿದರು.
ದೇವಸ್ಥಾನ ಕೆಡವಿರುವುದು, ಗಣೇಶೋತ್ಸವಕ್ಕೆ ನಿರ್ಬಂಧ, ದತ್ತಪೀಠ ವಿಚಾರಗಳನ್ನು ನೋಡುವಾಗ ಬಿಜೆಪಿ ಕೂಡ ಸೆಕ್ಯುಲರ್ ಆಗಲು ಹೊರಟಿದೆ. ನೆನಪಿಟ್ಟುಕೊಳ್ಳಿ ಬಿಜೆಪಿಯವರೇ, ನಿಮ್ಮ ಹೆಂಡತಿಯರು ಮುಸ್ಲಿಮ್ ಏರಿಯಾದಲ್ಲಿ ಓಡಾಡಿದರೂ ಒಂದು ಓಟು ಕೂಡ ಬೀಳಲ್ಲ ಎಂದು ಮುತಾಲಿಕ್ ತಮ್ಮ ಎಂದಿನ ಶೈಲಿಯಲ್ಲಿ ಹೇಳಿದರು.

Join Whatsapp