ಮುಸ್ಲಿಮರು ಅಲ್ಪಸಂಖ್ಯಾಕರು ಅಲ್ಲ: ಬಸವರಾಜ ಬೊಮ್ಮಾಯಿ

Prasthutha|

ಬೆಂಗಳೂರು: ರಾಜ್ಯ ಸರಕಾರ ಸ್ವೀಕಾರ ಮಾಡಿರುವ ವರದಿಯಲ್ಲಿ 70 ಲಕ್ಷ ಮುಸ್ಲಿಮರಿದ್ದಾರೆ ಎಂಬ ಅಂಶ ಸೋರಿಕೆಯಾಗಿದೆ. ಹಾಗಿದ್ದರೆ ಅವರು ಹೇಗೆ ಅಲ್ಪಸಂಖ್ಯಾಕ ರಾಗುತ್ತಿದ್ದಾರೆ? ರಾಜ್ಯದ ಬಹುಸಂಖ್ಯಾಕ ಜಾತಿಗಳಿಗಿಂತ ಅವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

- Advertisement -

ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ರಾಜ್ಯ ಸರಕಾರ ಜಾತಿ ಸಮೀಕ್ಷೆ ವರದಿಯನ್ನು ಸ್ವೀಕರಿಸುವ ಮೂಲಕ ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆ. ಸರಕಾರ ಬೆಂಕಿಯ ಜತೆ ಆಟವಾಡಲು ಹೊರಟಿದೆ. ಚುನಾವಣೆ ಹತ್ತಿರ ಬಂದಾಗ ಕಾಂಗ್ರೆಸ್‌ಗೆ ಜಾತಿಗಳ ಮೇಲೆ ಪ್ರೀತಿ ಬರುತ್ತದೆ, ಜಾತಿ ಸಮಾವೇಶ, ಸುಳ್ಳು ಆಶ್ವಾಸನೆ ಕೊಡುತ್ತಾರೆ.

ಈಗ ಕೊಟ್ಟಿರುವ ವರದಿಯಲ್ಲಿ ಗೊಂದಲ ಇದೆ. 5.82 ಕೋಟಿ ಜನರನ್ನು ಸಂಪರ್ಕಿಸಲಾಗಿದೆ ಎನ್ನುತ್ತಾರೆ. ಆದರೆ ಬಹುತೇಕ ಜನರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲ ಎಂದು ಅವರು ಹೇಳಿದರು.

Join Whatsapp