ಸ್ಕಾರ್ಫ್ ನಿಷೇಧ ವಿರುದ್ಧದ ಹೋರಾಟದಲ್ಲಿ ಮುಸ್ಲಿಮ್ ವಿದ್ಯಾರ್ಥಿನಿಗಳಿಗೆ ಜಯ: ಆಕಾರ್ ಪಟೇಲ್

Prasthutha|

ಹೈದರಾಬಾದ್: ಇತ್ತೀಚೆಗೆ ತಲೆದೋರಿರುವ ಸ್ಕಾರ್ಫ್ ಮತ್ತು ಕೇಸರಿ ಶಾಲು ಸಂಘರ್ಷ ತಾರತಕ್ಕೇರಿದ್ದು, ಸಂವಿಧಾನಬದ್ಧವಾಗಿ ನೀಡಿದ ಸ್ಕಾರ್ಫ್ ನ ಹಕ್ಕಿಗಾಗಿ ಹೋರಾಡುವ ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಜಯ ದೊರೆಯಲಿದೆ ಎಂದು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇದರ ಭಾರತೀಯ ಅಧ್ಯಕ್ಷ, ಪತ್ರಕರ್ತ ಆಕಾರ್ ಪಟೇಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

- Advertisement -

ಭಾರತದಲ್ಲಿ ಇತ್ತೀಚೆಗೆ ದಿನಗಳಲ್ಲಿ ದ್ವೇಷ ಭಾಷಣ ವೈಭವೀಕರಿಸುವ ಮತ್ತು ರಾಜಕೀಯಗೊಳಿಸುವ ಪ್ರಯತ್ನದ ವಿರುದ್ಧ ಆಕಾರ್ ಪಟೇಲ್ ನಿರಂತರ ಹೋರಾಟದ ಮೂಲಕ ಹೊಸ ಛಾಪು ಮೂಡಿಸಿದ್ದಾರೆ.

ಕಳೆದ ಎರಡು ವರ್ಷಗಳಲ್ಲಿ ಆಕರ್ ಹಿಂದುತ್ವ ಮತ್ತು ನರೇಂದ್ರ ಮೋದಿಯ ನಾಯಕತ್ವದಲ್ಲಿ ಭಾರತದ ಆರ್ಥಿಕತೆಯ ಬಗ್ಗೆ ನಿರಂತರ ಗ್ರಂಥವನ್ನು ಬಿಡುಗಡೆಗೊಳಿಸಿದ ಆಕಾರ್ ಪಟೇಲ್ ಅವರು ಪ್ರಸಕ್ತ ಸ್ಕಾರ್ಫ್ ವಿಚಾರದ ಹೋರಾಟದಲ್ಲಿ ಕೈಜೋಡಿಸಿದ್ದಾರೆ.

Join Whatsapp