ಕುದುರೆ ಮೇಲೆ ಕೂರಿಸದ ಬಾಲಕನ ಕೊಲೆ| ಮೂವರ ಬಂಧನ

Prasthutha|

ಬೆಂಗಳೂರು: ದೊಡ್ಡವರನ್ನು ಕುದುರೆ ಮೇಲೆ ಕೂರಿಸುವುದಿಲ್ಲ ಎಂದ ಅಪ್ರಾಪ್ತ ಬಾಲಕನನ್ನು ಆಕ್ರೋಶಗೊಂಡು ಕೊಲೆಗೈದ ಮೂವರನ್ನು ಕಾಡುಗೊಂಡನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಸತೀಶ್ (15) ಎಂಬ ಬಾಲಕನನ್ನು ಕೊಲೆಗೈದು ಪರಾರಿಯಾಗಿದ್ದ ಸೈಯದ್ ಶೋಯೆಬ್‌, ಸುಹೇಲುಲ್ಲಾ ಷರೀಫ್, ಮಹಮ್ಮದ್ ಹುಸೇನ್ ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಕಳೆದ ಏ. 3ರಂದು ಕೆ.ಜಿ.ಹಳ್ಳಿ ರೈಲ್ವೆ ಹಳಿ ಬಳಿ ಈ ಕೊಲೆ ನಡೆದಿತ್ತು. ಮಾಸ್ಕ್​ ರಸ್ತೆಯಲ್ಲಿ ಬಾಲಕ ಸತೀಶ್ ಕುದುರೆ ಇಟ್ಟುಕೊಂಡಿದ್ದು, ಮಕ್ಕಳನ್ನು ಅದರ ಮೇಲೆ ಕೂರಿಸಿ ಆಡಿಸುತ್ತಿದ್ದ. ಕುದುರೆ ಮೇಲೆ ಸವಾರಿ ಮಾಡಲು ಸುಹೇಲುಲ್ಲಾ ಷರೀಫ್ ಬಂದಿದ್ದಾಗ ಸತೀಶ್ ದೊಡ್ಡವರನ್ನೆಲ್ಲ ಕುದುರೆ ಮೇಲೆ ಕೂರಿಸುವುದಿಲ್ಲ ಎಂದು ಹೇಳಿದ್ದ. ಆಗ ಆತ ಬಾಲಕನ ಕೆನ್ನೆಗೆ ಹೊಡೆದು ಹೋಗಿದ್ದ.

- Advertisement -
ಹತ್ಯೆಯಾದ ಬಾಲಕ ಸತೀಶ್

ಕೆಲ ದಿನಗಳ ಬಳಿಕ ಹೊಟೇಲೊಂದರ ಬಳಿ ಷರೀಫ್​ನನ್ನು ನೋಡಿದ್ದ ಬಾಲಕ ಸತೀಶ್ ಮತ್ತು ಸ್ನೇಹಿತರು ಸೇರಿ ಷರೀಫ್ ಮೇಲೆ ಹಲ್ಲೆ ಮಾಡಿದ್ದರು. ಈ ಹಲ್ಲೆಗೆ ಪ್ರತಿಕಾರವಾಗಿ ಸತೀಶ್ ಕೊಲೆಗೆ ಈ ಷರೀಫ್ ಸಂಚು ಹೂಡಿದ್ದ ಎನ್ನಲಾಗಿದೆ.

ಏಪ್ರಿಲ್ 3ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಸತೀಶ್​ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದೊಣ್ಣೆಗಳಿಂದ ಹೊಡೆದು ಆರೋಪಿಗಳು ಕೊಲೆ ಮಾಡಿದ್ದರು. ಸುಮಾರು 60 ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದ ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಿದ್ದಾರೆ.

Join Whatsapp