ಸ್ಟಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿಗೆ ಜಾಮೀನು ಮಂಜೂರು ಮಾಡಿದ ಸುಪ್ರೀಂ ಕೋರ್ಟ್

Prasthutha|

ನವದೆಹಲಿ : ಹಿಂದೂ ದೇವ-ದೇವತೆಗಳನ್ನು ಅವಮಾನಿಸಿದ ಆರೋಪದಲ್ಲಿ ಬಂಧಿತರಾಗಿದ್ದ ಸ್ಟಾಂಡ್ ಅಪ್ ಕಾಮಿಡಿಯನ್ ಮುನಾವರ್ ಫಾರೂಕಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. ಅಲ್ಲದೆ, ಈ ಸಂಬಂಧ ಮಧ್ಯಪ್ರದೇಶ ಸರಕಾರಕ್ಕೆ ಕೋರ್ಟ್ ನೋಟಿಸ್ ಕೂಡ ಜಾರಿಗೊಳಿಸಿದೆ.

- Advertisement -

ಮುನಾವರ್ ಫಾರೂಕಿಗೆ ಇದಕ್ಕೂ ಮೊದಲು ಮಧ್ಯಪ್ರದೇಶ ಹೈಕೋರ್ಟ್ ಸೇರಿದಂತೆ ಮೂರು ಬಾರಿ ಜಾಮೀನು ನಿರಾಕರಿಸಲಾಗಿತ್ತು.

ಬಿಜೆಪಿ ಶಾಸಕರೊಬ್ಬರ ದೂರಿನ ಆಧಾರದಲ್ಲಿ ಮುನಾವರ್ ಫಾರೂಕಿ ಅವರನ್ನು ಜ.1ರಂದು ಬಂಧಿಸಲಾಗಿತ್ತು. ಅವರ ಜೊತೆ ಇತರ ನಾಲ್ವರನ್ನೂ ಬಂಧಿಸಲಾಗಿತ್ತು.

- Advertisement -

ಹಿಂದೂ ದೇವ, ದೇವತೆಗಳು, ಕೇಂದ್ರ ಗೃಹ ಸಚಿವ ಅಮಿತ್ ಶಾ ಕುರಿತು ಎಲ್ಲಾ ಬಂಧಿತರು ಅವಮಾನಕಾರಿ ಹಾಸ್ಯಗಳನ್ನು ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಆದರೆ, ಈ ಬಗ್ಗೆ ಅವರ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಸ್ಥಳೀಯ ಪೊಲೀಸ್ ವರಿಷ್ಠರೇ ಹೇಳಿದ್ದರು.

Join Whatsapp