ಮುಮ್ತಾಝ್ ಅಲಿ ಕೇಸ್: ಆರೋಪಿಗಳ ಸ್ಥಳ ಮಹಜರು

Prasthutha|

ಸ್ಥಳೀಯರನ್ನು ತಡೆದು, ಪರಿಸ್ಥಿತಿ ಹತೋಟಿಗೆ ತಂದ ಪೊಲೀಸರು

- Advertisement -

ಸುರತ್ಕಲ್: ಉದ್ಯಮಿ ಮುಮ್ತಾಝ್ ಅಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸತ್ತಾರ್ ಮನೆಯಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆದಿದೆ.

ಪ್ರಮುಖ ಆರೋಪಿ ಸತ್ತಾರ್, ಶಾಫಿ ನಂದಾವರ ಮತ್ತು ರೆಹಮತ್‌ಳನ್ನು ಕಾವೂರು ಪೊಲೀಸರು ಬಿಗಿಭದ್ರತೆಯಲ್ಲಿ ಕೃಷ್ಣಾಪುರ 7ನೇ ಬ್ಲಾಕ್ ನಲ್ಲಿರುವ ಸತ್ತಾರ್ ನ ಮನೆಗೆ ಕರೆತಂದು ಮಹಜರು ನಡೆಸಿದರು.

- Advertisement -

ಆರೋಪಿಗಳನ್ನು ಕೆಎಸ್‌ಆರ್‌ಪಿ ತುಕಡಿಯ ಬಸ್ ನಲ್ಲಿ ಸ್ಥಳಕ್ಕೆ ಕರೆತಂದಿದ್ದರು. ಈ ವೇಳೆ ಸಾರ್ವಜನಿಕರು ಆರೋಪಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು. ಆಗ ಸ್ಥಳದಲ್ಲಿದ್ದ ಸುರತ್ಕಲ್ ಪೊಲೀಸರು ಹಾಗೂ ಕೆಎಸ್‌ಆರ್‌ಪಿ ಪೊಲೀಸರು ಉದ್ರಿಕ್ತ ಜನರನ್ನು ಹತೋಟಿಗೆ ತಂದರು.



Join Whatsapp