ಅಮಿತ್ ಶಾ ಭೇಟಿಗೆ ಮುಂಬೈನಲ್ಲಿ ಸಂಚಾರ ನಿರ್ಬಂಧ: ವ್ಯಾಪಕ ಆಕ್ರೋಶ

Prasthutha|

ಮುಂಬೈ: ಸೆಪ್ಟೆಂಬರ್ 4,5 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮುಂಬೈ ಭೇಟಿಯ ಸಮಯದಲ್ಲಿ ಅವರ ಬೆಂಗಾವಲು ವಾಹನ ಹಾದು ಹೋಗುವವರೆಗೂ ಆಂಬ್ಯುಲೆನ್ಸ್ ವೊಂದು ಕಾಯುತ್ತಿರುವ ವೀಡಿಯೋ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಅಮಿತ್ ಶಾ ಅವರಿಗೆ ಝೆಡ್ ಪ್ಲಸ್ ಮಾದರಿಯ ರಕ್ಷಣೆಯನ್ನು ಕೊಡಲಾಗಿದೆ. ಅದೂ ಅಲ್ಲದೆ ಇದೇ ಮೊದಲ ಬಾರಿಗೆ ಬಿಜೆಪಿ ಆಡಳಿತ ಕೈಗೆ ತೆಗೆದು ಕೊಂಡಿದ್ದರಿಂದ ಮುಂಬೈನ ಹಲವು ಭಾಗಗಳಲ್ಲಿ ರಸ್ತೆಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಿ ನೆಟ್ಟಿಗರು ಟ್ವೀಟಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಯ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 4, 5 ರಂದು ದಕ್ಷಿಣ ಮುಂಬೈ, ಪಶ್ಚಿಮ ಉಪನಗರಗಳು ಮತ್ತು ಕೇಂದ್ರ ಮುಂಬೈನ ಕೆಲವು ಭಾಗಗಳಲ್ಲಿ ಮುಂಬೈನ ಸಂಚಾರ ಪೊಲೀಸರು ವಾಹನ ಚಾಲಕರಿಗೆ ಸಂಚಾರಕ್ಕೆ ನಿರ್ಬಂಧಿಸಿದ್ದರು.

Join Whatsapp