ಮೂಡಿಗೆರೆ: ವಿದ್ಯುತ್ ತಂತಿ ತಗುಲಿ ಹಸು ಸಾವು

Prasthutha|

ಚಿಕ್ಕಮಗಳೂರು: ಮೆಸ್ಕಾಂನ  ನಿರ್ಲಕ್ಷ್ಯ ತನದಿಂದ  ಕೆಳಗೆ ಬಿದ್ದ  ವಿದ್ಯುತ್ ತಂತಿ ತಗುಲಿ ಮೇಯಲು ಹೋಗಿದ್ದ ಹಸು ಸ್ಥಳದಲ್ಲೇ ಸಾವನ್ನಪ್ಪಿದ  ಘಟನೆ  ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ದ ಅಜಾದ್ ನಗರ ದಲ್ಲಿ ಸಂಭವಿಸಿದೆ.

- Advertisement -

ಗ್ರಾಮದ ತೂಫಾನ್ ಮಂಜು ನಾಯ್ಕ್ ಅವರಿಗೆ ಸೇರಿದ್ದ ಸಿಂಧಿ ಹಸು ಮೇಯುತ್ತಿದ್ದ ವೇಳೆ ಅವಘಡಕ್ಕೊಳಗಾಗಿ ಪ್ರಾಣ ಕಳೆದುಕೊಂಡಿದೆ. ಮಕ್ಕಳು ಮತ್ತು ಗ್ರಾಮಸ್ಥರು ತಿರುಗಾಡುವ ಸ್ಥಳದಲ್ಲೇ ಈ ಅವಘಡ ನಡೆದಿದ್ದು, ಮೆಸ್ಕಾಂ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.



Join Whatsapp