ಪ್ರತಾಪ ಸಿಂಹಗೆ ಬಟ್ಟೆ ಬಿಚ್ಚಿ ಹೊಡೆಯುವ ಎಚ್ಚರಿಕೆ ಕೊಟ್ಟ ಸ್ವಾಮೀಜಿ

Prasthutha|

ಕಲಬುರಗಿ: ಸಂಸದ ಪ್ರತಾಪ್ ಸಿಂಹರಿಗೆ ಮಹಾಂತ ಶಿವಾಚಾರ್ಯ ಶ್ರೀಗಳು ತೀಕ್ಷ್ಣವಾಗಿ ಎಚ್ಚರಿಕೆ ನೀಡಿದ್ದಾರೆ. ಕಲಬುರಗಿಯ ಕಾಂಗ್ರೆಸ್ ಶಾಸಕ ಪ್ರಿಯಾಂಕ್​ ಖರ್ಗೆರನ್ನು ಸಂಸದ ಪ್ರತಾಪ್ ಸಿಂಹ ಅಸಭ್ಯವಾಗಿ ಟೀಕಿಸಿದ್ದಕ್ಕೆ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಮಹಾಂತ ಶಿವಾಚಾರ್ಯ ಶ್ರೀ “ಸಂಸದರನ್ನು ಬಟ್ಟೆ ಬಿಚ್ಚಿಸಿ ಹೊಡೆಯುತ್ತೇವೆ” ಎಂದಿದ್ದಾರೆ. ಹೇಳಿಕೆಯ ವಿಡಿಯೋ ವೈರಲ್ ಆಗಿದೆ.

- Advertisement -

ಪ್ರತಾಪ ಸಿಂಹ ಪ್ರಿಯಾಂಕ ಖರ್ಗೆ ಎಂಬ ಹೆಸರು ಗಂಡೋ ಹೆಣ್ಣೊ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದರು. ಕಾಂಗ್ರೆಸಿಗರು ಅದಕ್ಕೆ “ಸಿಂಹ ಎಂಬ ಹೆಸರು ಪ್ರಾಣಿಯೋ ಮನುಷ್ಯನೋ” ಎಂದು ಕೇಳಿದ್ದರು.

ಇದೀಗ ಪ್ರತಿಭಟನಾ ಸಭೆಯಲ್ಲಿ ಮಹಾಂತ ಶಿವಾಚಾರ್ಯ ಶ್ರೀ ಪ್ರಿಯಾಂಕ್​ ಖರ್ಗೆಗೆ ಟೀಕಿಸಿದ್ದ ಪ್ರತಾಪ್ ಸಿಂಹ ಕೂಡಲೇ ಪ್ರಿಯಾಂಕ್​ ಖರ್ಗೆ ಅವರ ಕ್ಷಮೆ ಕೇಳಬೇಕು.. ಇಲ್ಲದಿದ್ದರೆ ಅವರಿಗೆ ಚಡ್ಡಿ ಬಿಚ್ಚಿ ಹೊಡಿತೀನಿ. ಮೈಸೂರಿನಲ್ಲಿರೋ ಸಂಸದರ ಮನೆಗೇ ಹೋಗಿ ಹೊಡೆದು ಬರ್ತೇವೆ” ಎಂದಿದ್ದಾರೆ.



Join Whatsapp