ತಂಬಾಕು ಹರಾಜು ಪೂಜೆಗೆ ಆಗಮಿಸಿದ ಸಂಸದ ಪ್ರತಾಪ್ ಸಿಂಹಗೆ ರೈತರಿಂದ ಘೇರಾವ್

Prasthutha|

ಮೈಸೂರು: ತಂಬಾಕು ಹರಾಜು ಪೂಜೆಗೆ ಆಗಮಿಸಿದ ಸಂಸದ ಪ್ರತಾಪ್ ಸಿಂಹಗೆ ರೈತರು ಘೇರಾವ್ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ತಂಬಾಕು ಹರಾಜು ಮಾರ್ಕೆಟ್ ನಲ್ಲಿ ನಡೆದಿದೆ.

- Advertisement -

ಬೆಳಗ್ಗೆಯೇ ಏಕೆ ಹರಾಜು ಪ್ರಕ್ರಿಯೆ ಆರಂಭ ಮಾಡುತ್ತಿದ್ದೀರೆಂದು ರೈತರು ಪ್ರಶ್ನಿಸಿದ್ದು, ಮುಹೂರ್ತ ನೋಡಿ ಹರಾಜು ಮಾಡಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ಉತ್ತರಿಸಿದ್ದಾರೆ. ಇದಕ್ಕೆ ಗರಂ ಆದ ರೈತರು ಸಂಸದ ಪ್ರತಾಪ್ ಸಿಂಹಗೆ ಘೇರಾವ್ ಮಾಡಿದ್ದಾರೆ. ತಂಬಾಕಿಗೆ ಸರಿಯಾಗಿ ಆರಂಭಿಕ ಬೆಲೆ ನೀಡಿಲ್ಲ. ಕೇವಲ 185 ರೂ. ಆರಂಭಿಕ ಬೆಲೆ ನೀಡಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ರೈತರು ಮಾತಿನ ಚಕಮಕಿ ನಡೆಸಿದ್ದಾರೆ.

Join Whatsapp