ಕಾರು ಬಾವಿಯೊಳಗೆ ಬಿದ್ದು ತಾಯಿ, ಮಗ ಸಾವು: ರಕ್ಷಣೆಗೆ ಧಾವಿಸಿದ ಈಜುಗಾರನೂ ಮೃತ್ಯು !

Prasthutha|

ತೆಲಂಗಾಣ: ಕಾರೊಂದು ಆಕಸ್ಮಿಕವಾಗಿ ಬಾವಿಗೆ ಬಿದ್ದ ಪರಿಣಾಮ ತಾಯಿ, ಮಗ ಸಾವನ್ನಪ್ಪಿ, ರಕ್ಷಣೆಗೆ ಧಾವಿಸಿದ ಈಜುಗಾರ ಕೂಡಾ ಮೃತಪಟ್ಟ ಘಟನೆ ಸಿದ್ದಿಪೇಟ್ ಜಿಲ್ಲೆಯ ದುಬ್ಬಾಕ ಮಂಡಲ್ ಬಳಿ ನಡೆದಿದೆ.

- Advertisement -


ಚಿತ್ತಾಪುರ ಮತ್ತು ಭೂಂಪಲ್ಲಿ ಎಂಬ ಗ್ರಾಮಗಳ ಮಧ್ಯೆ ರಾಮಯಂಪೇಟೆಯಿಂದ ಸಿದ್ದಿಪೇಟ್ ಕಡೆಗೆ ಹೋಗುತ್ತಿದ್ದ ಕಾರೊಂದು ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಬಾವಿಯೊಳಗೆ ಬಿದ್ದಿದೆ. ಈ ವೇಳೆ, ಮೇದಕ್ ಜಿಲ್ಲೆಯ ನಿಜಾಂಪೇಟ್ ಮಂಡಲದ ನಂದಿಗಾಮ ಗ್ರಾಮದ ತಾಯಿ ಮತ್ತು ಮಗ ಇಬ್ಬರೂ ದುರಂತ ಅಂತ್ಯ ಕಂಡಿದ್ದಾರೆ.


ಕಾರು ಮತ್ತು ಮೃತದೇಹಗಳನ್ನು ಹೊರತೆಗೆಯಲು ಬಾವಿಯೊಳಗೆ ಇಳಿದಿದ್ದ ಈಜುಗಾರ ನರಸಿಂಹಲು ಎಂಬಾತ ಕೂಡಾ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾನೆ.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳೀಯರ ಜೊತೆಗೂಡಿ ಕಾರ್ಯಾಚರಣೆ ನಡೆಸಿದ್ದು, ಬಾವಿಯಲ್ಲಿದ್ದ ನೀರನ್ನು ಮೋಟಾರುಗಳ ಮೂಲಕ ಖಾಲಿ ಮಾಡಿ, ಕ್ರೇನ್ ಸಹಾಯದಿಂದ ಕಾರು ಹಾಗೂ ಮೃತದೇಹಗಳನ್ನು ಹೊರತೆಗೆದಿದ್ದಾರೆ.

Join Whatsapp