ಮೊರ್ಬಿ:  ತೂಗುಸೇತುವೆ ದುರಂತ; ಸಂತ್ರಸ್ತರಿಗೆ ಸಹಾಯ ಹಸ್ತ ಚಾಚಿದ ಮುಸ್ಲಿಂ ಸಮುದಾಯ

Prasthutha|

ಗಾಂಧಿನಗರ: ಗುಜರಾತ್ ನ ಮೊರ್ಬಿ ತೂಗುಸೇತುವೆ ಕುಸಿದು ಹಲವು ಸಾವು- ನೋವುಗಳು ಸಂಭವಿಸಿದ್ದು, ರಕ್ಷಣಾಪಡೆಯ ಕಾರ್ಯಾಚರಣೆ ಮೂಲಕ ಹಲವರನ್ನು ರಕ್ಷಿಸಲಾಗಿದೆ. ಅದರಲ್ಲೂ ಮೊರ್ಬಿಯ ಮುಸ್ಲಿಂ ಸಮುದಾಯವು ಸುಮಾರು 80 ಕ್ಕೂ ಹೆಚ್ಚು ಜೀವಗಳನ್ನು ಉಳಿಸಿದೆ.

- Advertisement -

ಮೆಹಬೂಬ್ ಹುಸೇನ್ ಪಠಾಣ್, ತೌಫಿಕ್, ಹಬೀಬುಲ್ ಶೇಖ್, ನಯೀಮ್ ಶೇಖ್ ಅವರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಇತರರ ಜೀವಗಳನ್ನು ಉಳಿಸಿದ ಅಪ್ರತಿಮ ವೀರರಾಗಿದ್ದಾರೆ.

ನುರಿತ ಈಜುಗಾರನಾದ ಹುಸೇನ್, ತನ್ನ ಸುರಕ್ಷತೆಯ ಬಗ್ಗೆ ಚಿಂತಿಸದೆ ಸ್ಥಳಕ್ಕೆ ಧಾವಿಸಿ, ಸುಮಾರು 50 ಜನರನ್ನು ಸುರಕ್ಷಿತವಾಗಿ ದಡಕ್ಕೆ ಕರೆತರಲು ಸಹಾಯ ಮಾಡಿದ್ದಾನೆ.

- Advertisement -

ಅಪಾಯದಲ್ಲಿ ಸಿಲುಕಿರುವವರ ಜೀವ ಉಳಿಸಲು ತನ್ನ ಐವರು ಸ್ನೇಹಿತರೊಂದಿಗೆ ಈಜಿದ ನಯೀಮ್ ಶೇಖ್, ಮಾಧ್ಯಮಗಳೊಂದಿಗೆ ಮಾತನಾಡುತ್ತಾ”ಜೀವಗಳನ್ನು ಉಳಿಸುವ ಭರದಲ್ಲಿ ಹೆಚ್ಚು ನೀರು ಕುಡಿದಿದ್ದರಿಂದ ತನ್ನ ಸ್ನೇಹಿತನೊಬ್ಬ ಪ್ರಾಣವನ್ನು ಕಳೆದುಕೊಂಡ” ಎಂದು ವಿಷಾದಿಸಿದರು.

ಆಂಬ್ಯುಲೆನ್ಸ್ ಚಾಲಕ ಹುಸೇನ್, ದುರಂತದಲ್ಲಿ ತನ್ನ ಸ್ವಂತ ಸೋದರ ಸಂಬಂಧಿ ಸಾವನ್ನಪ್ಪಿದರೂ ಹಲವಾರು ಜನರನ್ನು ಸಿವಿಲ್ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದನು. ಸ್ಥಳೀಯರಾದ ಮಿಲನ್ ಪ್ರಕಾಶ್ ಭಾಯ್ ಅವರು ರಾತ್ರಿಯಿಡೀ ಗಾಯಾಳುಗಳು ಮತ್ತು ಮೃತರನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು. ನಾಗರಿಕ ಆಸ್ಪತ್ರೆಯ ಸಾಮಾಜಿಕ ಕಾರ್ಯಕರ್ತೆ ಹಸೀನಾ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸುವ ಮೂಲಕ ದೇಹಗಳನ್ನು ಗುರುತಿಸಲು ಸಹಾಯ ಮಾಡಿದರು. ರವಿ ಮತ್ತು ಆತನ ಸ್ನೇಹಿತರು ಗಾಯಾಳುಗಳಿಗೆ ಆಹಾರ ಮತ್ತು ನೀರನ್ನು ಒದಗಿಸಿದರು ಎಂದು ತಿಳಿದು ಬಂದಿದೆ.

Join Whatsapp