ಬಂದೂಕು ಹಿಡಿದು ಬ್ಯಾಂಕ್ ಗೆ ನುಗ್ಗಿದ ಸನ್ಯಾಸಿ: ಲೂಟಿ ಮಾಡೋದಾಗಿ ಬೆದರಿಕೆ

Prasthutha|

ಚೆನ್ನೈ: ಬಂದೂಕು ಹಿಡಿದು ಸನ್ಯಾಸಿಯೋರ್ವ ಬ್ಯಾಂಕ್ ಗೆ ನುಗ್ಗಿ ಲೂಟಿ ಮಾಡುವುದಾಗಿ ಬೆದರಿಕೆಯೊಡ್ಡಿರುವ ಘಟನೆ ತಮಿಳುನಾಡಿನ ತಿರುವಾರೂರಿನಲ್ಲಿ ನಡೆದಿದೆ.

- Advertisement -

ಸನ್ಯಾಸಿಯನ್ನು ತಿರುಮಲೈ ಸಾಮಿ ಎಂದು ಗುರುತಿಸಲಾಗಿದ್ದು, ಈತ ಚೀನಾದಲ್ಲಿ ವೈದ್ಯಕೀಯ ಪದವಿ ಓದುತ್ತಿರುವ ತನ್ನ ಮಗಳಿಗೆ ಸಾಲ ನೀಡುವಂತೆ ಕೇಳಲು ಖಾಸಗಿ ವಲಯದ ಬ್ಯಾಂಕ್ ಮೊರೆ ಹೋಗಿದ್ದನು. ಈ ವೇಳೆ ಬ್ಯಾಂಕ್ ಅಧಿಕಾರಿಗಳು ಆಸ್ತಿ ದಾಖಲೆ ನೀಡುವಂತೆ ಕೇಳಿದ್ದು, ಇದಕ್ಕೆ ತಿರುಮಲೈ ಸಾಮಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಈ ಹಿನ್ನೆಲೆ ಬ್ಯಾಂಕ್ ಅಧಿಕಾರಿಗಳು ತಿರುಮಲೈ ಸಾಮಿ ಸಲ್ಲಿಸಿದ್ದ ಸಾಲದ ಅರ್ಜಿಯನ್ನು ತಿರಸ್ಕರಿಸಿದರು. ಇದರಿಂದ ಕೋಪಗೊಂಡ ತಿರುಮಲೈ ಸಾಮಿ ಬಂದೂಕು ಹಿಡಿದು ಬ್ಯಾಂಕಿಗೆ ಬಂದು ಬೆದರಿಕೆ ಹಾಕಿದ್ದಾರೆ.
ಪೊಲೀಸರು ಬ್ಯಾಂಕ್ ಗೆ ಆಗಮಿಸಿ ಸನ್ಯಾಸಿಯನ್ನು ಬಂಧಿಸಿ, ತನಿಖೆ ಆರಂಭಿಸಿದ್ದಾರೆ.




Join Whatsapp