ಮೊಯ್ದೀನ್-ಇನಾಯತ್ ಅಲಿ ಬೆಂಬಲಿಗರ ಮುಖಾಮುಖಿ: ಪರ-ವಿರೋಧ ಘೋಷಣೆ

Prasthutha|

ಮಂಗಳೂರು: ನಗರದ ಮಿನಿವಿಧಾನಸೌಧ ಬಳಿ ಕಾಂಗ್ರೆಸ್ ಅಭ್ಯರ್ಥಿ ಇನಾಯತ್ ಅಲಿ ಹಾಗೂ ಜೆಡಿಎಸ್ ಅಭ್ಯರ್ಥಿ ಮೊಯ್ದೀನ್ ಬಾವಾ ಬೆಂಬಲಿಗರ ನಡುವೆ ಮಾತಿನ ಚಕಮಕಿ, ಪರ-ವಿರೋಧ ಘೋಷಣೆ ಕೂಗಿದ ಪ್ರಸಂಗ ನಡೆಯಿತು.

- Advertisement -

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿ ಇನಾಯತ್ ಅಲಿ ಅವರು ನಾಮಪತ್ರ ಸಲ್ಲಿಕೆಗೆ ಮಿನಿ ವಿಧಾನಸೌಧಕ್ಕೆ ಆಗಮಿಸಿದರು. ಅದೇ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಮೊಯ್ದೀನ್ ಬಾವಾ ಕೂಡ ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದರು. ಇಬ್ಬರು ನಾಯಕರ ಬೆಂಬಲಿಗರು ಈ ವೇಳೆ ಪರಸ್ಪರ ಘೋಷಣೆ ಕೂಗಿದ ಘಟನೆ ನಡೆಯಿತು.
‘ಕಳ್ಳ ಕಳ್ಳ ಡಿಕೆಶಿ ಕಳ್ಳ, ಮುಸ್ಲಿಮ್ ವಿರೋಧಿ ಡಿಕೆಶಿ’ ಮುಂತಾದ ಘೋಷಣೆಗಳು ಕೇಳಿಬಂದವು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವಾ ಅವರು ಈ ಬಾರಿಯೂ ಕಾಂಗ್ರೆಸ್ ಟಿಕೆಟ್’ಗಾಗಿ ಪ್ರಬಲ ಪೈಪೋಟಿ ನಡೆಸಿದ್ದರು. ಆದರೆ ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಇನಾಯತ್ ಅಲಿ ಅವರಿಗೆ ಟಿಕೆಟ್ ನೀಡಿತ್ತು. ತೀವ್ರ ಆಕ್ರೋಶಗೊಂಡಿದ್ದ ಮೊಯ್ದೀನ್ ಬಾವಾ ಅವರು ಗುರುವಾರ ಬೆಳಗ್ಗೆ ಜೆಡಿಎಸ್ ಸೇರ್ಪಡೆಯಾಗಿ ಬಿ ಫಾರಂ ಕೂಡ ಪಡೆದು ಕಣಕ್ಕಿಳಿದಿದ್ದಾರೆ.

Join Whatsapp