ಪ್ರವಾದಿ ಅವಹೇಳನ । ಪ್ರಧಾನಿ ಮೋದಿ ಮೌನ ಮುರಿಯಲಿ: ಶಶಿ ತರೂರ್

Prasthutha|

ನವದೆಹಲಿ: ಪ್ರವಾದಿ ಪೈಗಂಬರ್ ವಿರುದ್ಧ ಕೀಳುಮಟ್ಟದ ಹೇಳಿಕೆ ನೀಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಹೇಳಿಕೆ ಖಂಡಿಸಿ ದೇಶದಲ್ಲಿ ದಂಗೆ ಆರಂಭವಾಗಿದೆ, ಈ ಸನ್ನಿವೇಶದಲ್ಲಾದರೂ ಪ್ರಧಾನಿ ನರೇಂದ್ರ ಮೋದಿ ತನ್ನ ಮೌನವನ್ನು ಮುರಿಯಲಿ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ.

- Advertisement -

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ತರೂರ್, ಮುಸ್ಲಿಂ ಸಮುದಾಯ ಪ್ರವಾದಿ ಅವಹೇಳನದ ವಿರುದ್ಧ ಪ್ರತಿಭಟನೆಗಿಳಿದಿದೆ, ಕೆಲವೆಡೆ ಪ್ರತಿಭಟನೆಯು ವಿಕೋಪಕ್ಕೆ ತಿರುಗಿದೆ. ಈ ಬೆಳವಣಿಗೆಯು ಭಾರತ ಮತ್ತು ಮುಸ್ಲಿಂ ರಾಷ್ಟ್ರಗಳೊಂದಿಗೆ ಕೆಲ ವರ್ಷಗಳಿಂದ ಬೆಳೆದಿದ್ದ ಉತ್ತಮ ಸಂಬಂಧಕ್ಕೆ ಹೊಡೆತ ಬಿದ್ದಿದೆ. ಈಗಲಾದರೂ ಪ್ರಧಾನಿ ಮೋದಿ ಮಾತನಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

ನಡೆಯುತ್ತಿರುವ ಅನಾಹುತಗಳ ಬಗ್ಗೆ ಮೋದಿ ಗಮನಿಸಿಕೊಂಡು, ಸಾರ್ವಜನಿಕವಾಗಿ ಮಾತನಾಡಬೇಕು. ಮುಸ್ಲಿಂ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧಗಳೊಂದಿಗೆ ದೇಶ ಪ್ರಗತಿಯತ್ತ ಮುನ್ನುಗ್ಗುತ್ತಿದ್ದಂತೆ ಈ ರೀತಿಯ ವರ್ತನೆಗಳು ಸರಿಯಲ್ಲ. ಇದರಿಂದ ದೇಶದ ಪ್ರಗತಿಗೆ ಅಪಾಯವಾಗಲಿದೆ ಎಂದು ಶಶಿ ತರೂರ್ ಹೇಳಿದ್ದಾರೆ.

Join Whatsapp