ಮೊಬೈಲ್ ಕಳ್ಳತನ ಆರೋಪ: ಬಾವಿಯೊಳಗೆ ಕೂಡಿ ಹಾಕಿ ಹಿಂಸೆ

Prasthutha|

ಭೋಪಾಲ್: ಮೊಬೈಲ್ ಕಳ್ಳತನದ ಆರೋಪದ ಮೇಲೆ ಬಾಲಕನೊಬ್ಬನನ್ನು ಬಾವಿಯೊಳಗೆ ಹಾಕಿ ಹಿಂಸೆ ನೀಡಿದ ಘಟನೆ ಮಧ್ಯಪ್ರದೇಶದ ಛಾತ್ರಪುರ್ ಜಿಲ್ಲೆಯಲ್ಲಿ ನಡೆದಿದೆ.

- Advertisement -


ಘಟನೆಗೆ ಸಂಬಂಧಿಸಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -


ವ್ಯಕ್ತಿಯೊಬ್ಬ ವೀಡಿಯೋದಲ್ಲಿ 14 ವರ್ಷದ ಬಾಲಕನಿಗೆ ‘ನೀನು ಮೊಬೈಲ್ ಕದ್ದಿರುವುದನ್ನು ಒಪ್ಪಿಕೊ, ಇಲ್ಲವಾದರೆ ಇಲ್ಲಿಯೇ ನಿನ್ನನ್ನು ಸಾಯಿಸುತ್ತೇನೆ ಎಂದು ನೀರು ತುಂಬಿದ ಬಾವಿಯೊಳಗೆ ನೇತುಹಾಕಿ ಜೀವ ಬೆದರಿಕೆ ಹಾಕಿರುವುದು ಕಾಣುತ್ತದೆ. ಅಲ್ಲದೆ, ಬಾಲಕ ಆರೋಪವನ್ನು ನಿರಾಕರಿಸುತ್ತಾ ಸಾಯಿಸಬೇಡ ಎಂದು ಬೇಡಿಕೊಳ್ಳುವುದು ವೀಡಿಯೊದಲ್ಲಿ ದಾಖಲಾಗಿದೆ.

Join Whatsapp