ಪಿರಿಯಾಪಟ್ಟಣದ ಚರ್ಚ್ ಗೆ ನುಗ್ಗಿ ಏಸು ಮೂರ್ತಿ ಧ್ವಂಸಗೊಳಿಸಿದ ದುಷ್ಕರ್ಮಿಗಳು

Prasthutha|

ಮೈಸೂರು: ಪಿರಿಯಾಪಟ್ಟಣದ ಸೆಂಟ್ ಮೇರಿಸ್ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಬಾಲ ಏಸುವಿನ ಪ್ರತಿಮೆ ಹಾಗೂ ತೊಟ್ಟಿಲನ್ನು ಹೊಡೆದು ಹಾಕಿದ ಘಟನೆ ನಡೆದಿದೆ.

- Advertisement -

ಚರ್ಚ್ ಒಳಗೆ ನುಗ್ಗಿದ ದುಷ್ಕರ್ಮಿಗಳು ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಚರ್ಚ್ ಒಳಗೆ ತೊಟ್ಟಿಲಲ್ಲಿ ಮಲಗಿಸಿದ್ದ ಬಾಲ ಏಸುವಿನ ಮೂರ್ತಿಯನ್ನು ಧ್ವಂಸಗೊಳಿಸಿ ಚರ್ಚ್ ಹೊರಗೆ ಇದ್ದ ಹುಂಡಿಯನ್ನು ಕಳ್ಳತನ ಮಾಡಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಕುರಿತು ಚರ್ಚ್’ನ ಫಾದರ್ ಜಾನ್ ಪಾಲ್ ದೂರು ನೀಡಿದ್ದು, ಎಂಟು ಧ್ವನಿ ವರ್ಧಕಗಳು, ಮೊಂಬತ್ತಿ ಟೇಬಲ್, ಹೂಕುಂಡಗಳು, ಸೀರಿಯಲ್ ಸೆಟ್ ಹಾಗೂ ಗೋಲ್ಕಗಳನ್ನು ದುಷ್ಕರ್ಮಿಗಳು ಧ್ವಂಸಗೈದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

Join Whatsapp