ಕೊರೋನಾ ಪ್ರತಿಬಿಂಬಿಸುವ ಛಾಯಾಚಿತ್ರ ಪ್ರದರ್ಶನಕ್ಕೆ ಸಚಿವ ಸೋಮಶೇಖರ್ ಚಾಲನೆ: ಏಪ್ರಿಲ್ 30 ವರೆಗೆ ಸಾರ್ವಜನಿಕ ವೀಕ್ಷಣೆಗೆ ಲಭ್ಯ

Prasthutha|

ಬೆಂಗಳೂರು; ಹಿರಿಯ ಛಾಯಾಗ್ರಾಹಕ ಕಂದವಾರ ವೆಂಕಟೇಶ್ ಅವರು  ಕೊರೋನಾ ಸಾಂಕ್ರಾಮಿಕ ತಂದೊಡ್ಡಿದ ಸವಾಲುಗಳ ಸಂದರ್ಭದಲ್ಲಿ ಜನಸಾಮಾನ್ಯರ ಬದುಕು ವಿನಾಶದತ್ತ ಸಾಗಿದ ಸಂದರ್ಭದಲ್ಲಿ ತೆಗೆದ ಛಾಯಾಚಿತ್ರಗಳ ಪ್ರದರ್ಶನದ ಮುಂದುವರೆದ ಭಾಗ ಉತ್ತರ ಹಳ್ಳಿಯ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಕಾಲೇಜ್ ಆಫ್ ಪೈನ್ ಆರ್ಟ್ಸ್ ನಲ್ಲಿ ಇಂದಿನಿಂದ ಈ ತಿಂಗಳ ಅಂತ್ಯದವರೆಗೆ ಏರ್ಪಡಿಸಲಾಗಿದೆ.

- Advertisement -

ಕಾಲೇಜ್ ಆಫ್ ಫೈನ್ ಆರ್ಟ್ಸ್ ನಲ್ಲಿಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಛಾಯಾಚಿತ್ರ ಉದ್ಘಾಟಿಸಿದರು.

ಕೋವಿಡ್ ಸಂದರ್ಭದಲ್ಲಿ ಸಹಕಾರ ಸಚಿವರಾಗಿ, ವೈಯಕ್ತಿಕವಾಗಿ ಜನ ಸಾಮಾನ್ಯರಿಗೆ ನೆರವು ನೀಡಿದ್ದನ್ನು ಸಚಿವರು ಸ್ಮರಿಸಿಕೊಂಡರು. ಈ ನೆನಪುಗಳು ಸದಾಕಾಲ ಉಳಿಯುತ್ತವೆ. ಕಂದವಾರ ವೆಂಕಟೇಶ್ ಉತ್ತಮವಾಗಿ ಛಾಯಾಚಿತ್ರಗಳನ್ನು ತೆಗೆದಿದ್ದಾರೆ ಎಂದು ವ್ಯಕ್ತಪಡಿಸಿದರು. 

- Advertisement -

 ಈ ಸಂದರ್ಭದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಪ್ರೊಫೆಸರ್ ಕೆ.ಎಸ್. ಅಪ್ಪಾಜಯ್ಯ, ಕಾಲೇಜ್ ಆಫ್ ಫೈನ್ ಆರ್ಟ್ಸ್ ನ ಪ್ರೊಫೆಸರ್ ತೇಜಿಂದರ್ ಸಿಂಗ್ ಬೌನಿ ಮತ್ತಿತರರು ಉಪಸ್ಥಿತರಿದ್ದರು.



Join Whatsapp