ಸಚಿವ ಪಾರ್ಥ ಚಟರ್ಜಿ ಆಗಸ್ಟ್ 3 ರವರೆಗೆ ಇಡಿ ಕಸ್ಟಡಿಗೆ

Prasthutha|

ಕೋಲ್ಕತ್ತಾ: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಕೋಲ್ಕತ್ತದ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿ ಅವರನ್ನೂ ಕೋಲ್ಕತ್ತ ನ್ಯಾಯಾಲಯವು ಆಗಸ್ಟ್ 3 ರವರೆಗೆ ಜಾರಿ ನಿರ್ದೇಶನಾಲಯ (ಇಡಿ) ಕಸ್ಟಡಿಗೆ ಕಳುಹಿಸಿದೆ.

- Advertisement -

ಚಟರ್ಜಿ ಅವರನ್ನು ಭುವನೇಶ್ವರದ ಏಮ್ಸ್ ಗೆ ಕರೆದೊಯ್ದು ಅವರ ಆರೋಗ್ಯಕ್ಕೆ ಸಂಬಂಧಿಸಿದಂತೆ ನುರಿತ ವೈದ್ಯರಿಂದ ತಪಾಸಣೆ ಮಾಡಿಸುವಂತೆ ಭಾನುವಾರ ಕಲ್ಕತ್ತ ಹೈಕೋರ್ಟ್, ಇ.ಡಿ ಅಧಿಕಾರಿಗಳಿಗೆ ಸೂಚಿಸಿತ್ತು. ಅಲ್ಲದೆ, ಇಬ್ಬರೂ ಆರೋಪಿಗಳನ್ನು ಪ್ರತೀ 48 ಗಂಟೆಗೊಮ್ಮೆ ತಪಾಸಣೆ ನಡೆಸಬೇಕು ಮತ್ತು ತನಿಖಾಧಿಕಾರಿಗಳು ಅವರಿಗೆ ಕಿರುಕುಳ ನೀಡಬಾರದು ಎಂದೂ ಸೂಚಿಸಿತ್ತು.

ರಾತ್ರಿ 9ರಿಂದ ಬೆಳಿಗ್ಗೆ 6 ರವರೆಗೆ ಅರ್ಪಿತಾ ಅವರನ್ನು ವಿಚಾರಣೆ ನಡೆಸದಂತೆ ನ್ಯಾಯಾಲಯವು ಇ.ಡಿ.ಗೆ ಆದೇಶ ನೀಡಿದೆ.

- Advertisement -

ಪಶ್ಚಿಮ ಬಂಗಾಳದಲ್ಲಿ ಶಾಲಾ ಸೇವಾ ಆಯೋಗ (ಎಸ್ಎಸ್ಸಿ) ಹಗರಣಕ್ಕೆ ಸಂಬಂಧಿಸಿದಂತೆ ಪಾರ್ಥ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ಬಂಧಿಸಿತ್ತು.

Join Whatsapp