ಕರಾಚಿ ಮುಂದೊಂದು ದಿನ ಭಾರತದ ಭಾಗವಾಗಲಿದೆ : ದೇವೇಂದ್ರ ಫಡ್ನವೀಸ್

Prasthutha|

ನಾಗ್ಪುರ : ಪಾಕಿಸ್ತಾನದ ಕರಾಚಿ ಮುಂದೊಂದು ದಿನ ಭಾರತದ ಭಾಗವಾಗಲಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಫಡ್ನವೀಸ್ ಅವರ ಈ ಹೇಳಿಕೆಯ ಬಗ್ಗೆ ವ್ಯಂಗ್ಯವಾಡಿರುವ ಮಹಾರಾಷ್ಟ್ರ ಸರಕಾರದ ಸಚಿವ ನವಾಬ್ ಮಲಿಕ್, ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ವಿಲೀನ ಮಾಡುವ ‘ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ನಿರ್ಧಾರವನ್ನು’ ಎನ್ ಸಿಪಿ ಸ್ವಾಗತಿಸುತ್ತದೆ ಎಂದಿದ್ದಾರೆ.

- Advertisement -

ಶಿವಸೇನಾ ನಾಯಕರೊಬ್ಬರು ಇತ್ತೀಚೆಗೆ ಮುಂಬೈಯಲ್ಲಿ ‘ಕರಾಚಿ ಸ್ವೀಟ್ಸ್’ ಬೇಕರಿ ಹೆಸರು ಬದಲಾಯಿಸುವಂತೆ ಒತ್ತಾಯಿಸಿದ ಘಟನೆಯ ಹಿನ್ನೆಲೆಯಲ್ಲಿ ಫಡ್ನವೀಸ್ ಈ ಹೇಳಿಕೆ ಹೊರಬಂದಿತ್ತು.

“ನಾವು ಅಖಂಡ ಭಾರತದ ಬಗ್ಗೆ ವಿಶ್ವಾಸ ಹೊಂದಿದ್ದೇವೆ. ಮುಂದೊಂದು ದಿನ ಕರಾಚಿ ಭಾರತದ ಭಾಗವಾಗಲಿದೆ ಎಂಬ ಭರವಸೆಯನ್ನೂ ನಾವು ಹೊಂದಿದ್ದೇವೆ’’ ಎಂದು ಫಡ್ನವಿಸ್ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದ್ದರು.

- Advertisement -

ಫಡ್ನವೀಸ್ ರ ಈ ಹೇಳಿಕೆಯನ್ನು ಎನ್ ಸಿಪಿ ಬೆಂಬಲಿಸಲಿದೆ ಎಂದು ಸಚಿವ ನವಾಬ್ ಮಲಿಕ್ ಹೇಳಿದ್ದಾರೆ. “ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ವಿಲೀನವಾಗಬೇಕೆಂದು ನಾವು ಹೇಳುತ್ತಾ ಬಂದಿದ್ದೇವೆ. ಬರ್ಲಿನ್ ಗೋಡೆ ಧ್ವಂಸಗೊಳ್ಳಬಹುದಾದರೆ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಯಾಕೆ ಒಂದಾಗಬಾರದು? ಬಿಜೆಪಿ ಈ ಮೂರು ದೇಶಗಳನ್ನು ಒಂದುಗೂಡಿಸಲು ಬಯಸುವುದಾದರೆ, ನಾವು ಖಚಿತವಾಗಿ ಅದನ್ನು ಸ್ವಾಗತಿಸುತ್ತೇವೆ’’ ಎಂದು ನವಾಬ್ ಮಲಿಕ್ ತಿಳಿಸಿದ್ದಾರೆ.

Join Whatsapp