ಮಾನಸಿಕ ಖಿನ್ನತೆ; ಕೈ ಕೊಯ್ದುಕೊಂಡು ಆತ್ಮಹತ್ಯೆ

Prasthutha|

ಚಿಕ್ಕಮಗಳೂರು : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಬ್ಲೇಡ್ ನಿಂದ ತನ್ನ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಎನ್ ಆರ್ ಪುರ ತಾಲೂಕಿನ ಕಡಹಿನಬೈಲಿನಲ್ಲಿ ನಡೆದಿದೆ. 

- Advertisement -

ಕಡಹಿನಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಸೂಸಲವಾನಿ ಪೌಲೋಸ್ ಮೃತ ವ್ಯಕ್ತಿ. ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದ ತನ್ನ ಸಹೋದರ ಮಥಾಯ್ ಅವರ ವಿಯೋಗದಿಂದ ಅತೀವ ದುಃಖಕ್ಕೀಡಾಗಿ ಖಿನ್ನತೆಗೆ ಒಳಗಾಗಿದ್ದ ಪೌಲೋಸ್, ಶುಗರ್, ಟಿ.ಬಿ ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದರು.

ಶೇವಿಂಗ್ ಮಾಡಿಕೊಳ್ಳಲೆಂದು ಬ್ಲೇಡ್ ತೆಗೆದುಕೊಂಡ ಪೌಲೋಸ್ ತನ್ನ ಕೈಯನ್ನು ಕೊಯ್ದುಕೊಂಡಿದ್ದಾರೆ. ರಕ್ತಸ್ರಾವ ಅತಿಯಾದ ಕಾರಣ ಮನೆಯವರು ತಕ್ಷಣವೇ ಆಂಬುಲೆನ್ಸ್ ನ ಸಹಾಯದಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಒದಗಿಸಿದರು. 

- Advertisement -

ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ    ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.



Join Whatsapp