ಪ್ರೀತಿ ಮಾಡಲು ಚೆನೈನಿಂದ ಸುರತ್ಕಲ್ ಗೆ ಓಡಿ ಬಂದ ಎಂಬಿಬಿಎಸ್ ವಿದ್ಯಾರ್ಥಿನಿ: ಬಂದ ಬಳಿಕ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

Prasthutha|

ಮಂಗಳೂರು: ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಎಂಜಿನಿಯರ್ ವಿದ್ಯಾರ್ಥಿಯ ಜೊತೆ ಪ್ರೀತಿ ಬೆಳೆಸಲು ರಾಜಸ್ಥಾನ ಮೂಲದ ಪ್ರಸ್ತುತ ಚೆನ್ನೈನಲ್ಲಿ ಎಂಬಿಬಿಎಸ್ ದ್ವಿತೀಯ ವರ್ಷ ಓದುತ್ತಿರುವ ವಿದ್ಯಾರ್ಥಿನಿಯೋರ್ವಳು ಓಡಿ ಬಂದ ಘಟನೆ ನಗರದ ಸುರತ್ಕಲ್ ನಲ್ಲಿ ನಡೆದಿದೆ.

- Advertisement -

ರೇಶು ಎಂಬಾಕೆ ಚೆನ್ನೈನಲ್ಲಿ ಎಂಬಿಬಿಎಸ್ ಓದುತ್ತಿದ್ದು ಯಾವುದೋ ಕಾರಣಕ್ಕೆ ಸುರತ್ಕಲ್ಗೆ ಬಂದಿದ್ದಳು. ಬರುವ ಸಂದರ್ಭ ಬ್ಯಾಗ್,ಮೊಬೈಲ್ ಕಳವಾಗಿ, ಸುರತ್ಕಲ್ನ ಕಾಂತೇರಿ ದೈವಸ್ಥಾನದ ಬಳಿ ಕೈಯ್ಯಲ್ಲಿ ದುಡ್ಡಿಲ್ಲದೆ ಚಿನ್ನ ಮಾರಲು ಅಂಗಡಿಯನ್ನು ವಿಚಾರಿಸುತ್ತಿದ್ದಳು. ಯುವತಿಯ ಬಗ್ಗೆ ಸಂಶಯ ಮೂಡಿದಾಗ ಸ್ಥಳೀಯ ಉಮೇಶ್ ದೇವಾಡಿಗ ಇಡ್ಯಾ ಹಾಗೂ ಸ್ಥಳೀಯರಾದ ಕೃಷ್ಣಪ್ಪ, ಕೇಶವ , ನಾಗೇಶ್ ಕಾನಾ ಎಂಬವರು ವಿಚಾರಿಸಿ, ದಾರಿ ತಪ್ಪಿ ಬಂದಿರುವ ಶಂಕೆ ವ್ಯಕ್ತವಾದಾಗ ಸುರತ್ಕಲ್ ಪೊಲೀಸ್ ಠಾಣೆಗೆ ಯುವತಿಯನ್ನು ಒಪ್ಪಿಸಿದ್ದಾರೆ.

ಠಾಣೆಯಲ್ಲಿ ವಿಚಾರಣೆ ನಡೆಸಿದಾಗ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಎಂಜಿನಿಯರ್ ವಿದ್ಯಾರ್ಥಿಯ ಜೊತೆ ಸಖ್ಯ ಬೆಳೆಸಲು ಬಂದಿರುವಾಗಿ ಯುವತಿ ತಿಳಿಸಿದ್ದಳು. ಆದರೆ ಸ್ಥಳೀಯ ಸಂಸ್ಥೆಯ ಎಂಜಿನಿಯರ್ ವಿದ್ಯಾರ್ಥಿಗೆ ಈಕೆಯ ಪರಿಚಯವಿಲ್ಲ ಎಂಬುದು ತಿಳಿದು ಬಂದಿದ್ದು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

- Advertisement -

ಈ ಹಿಂದೆಯೂ ಇದೇ ರೀತಿ ಮನೆ ಬಿಟ್ಟು ಹೋದ ಬಗ್ಗೆ ಮಾಹಿತಿ ತಿಳಿದು ಬಂದಿದ್ದು, ಯುವತಿಯನ್ನು ಸುರಕ್ಷಿತವಾಗಿ ಪೋಷಕರಿಗೆ ಹಸ್ತಾಂತರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಠಾಣಾಧಿಕಾರಿಗಳು ತಿಳಿಸಿದ್ದಾರೆ.



Join Whatsapp