ಮಥುರಾ: ಜಲಾವೃತ ಪ್ರದೇಶ ದಾಟಲು ಕುರ್ಚಿ ಬಳಸಿದ ಶಿಕ್ಷಕಿ ಅಮಾನತು

Prasthutha|

ಲಕ್ನೋ: ವಿದ್ಯಾರ್ಥಿಗಳ ಮುಖಾಂತರ  ಕುರ್ಚಿಗಳನ್ನಿರಿಸಿ  ಅದರ ಮೇಲೆ  ಹತ್ತಿಕೊಂಡು ಶಿಕ್ಷಕಿಯೊಬ್ಬರು  ಪ್ರವಾಹ ಪೀಡಿತ ಶಾಲೆಗೆ ಪ್ರವೇಶಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು,  ಶಿಕ್ಷಕಿಯನ್ನು ಅಮಾನತುಗೊಳಿಸಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

- Advertisement -

ಶಾಲಾ ಆವರಣದ ಪ್ರವೇಶದ್ವಾರದಲ್ಲಿ ಶಿಕ್ಷಕಿ ಜಲಾವೃತವಾದ ಪ್ರದೇಶವನ್ನು ದಾಟಲು ಕುರ್ಚಿಗಳ ಮೇಲೆ ಹತ್ತುವುದನ್ನು ವೀಡಿಯೊದಲ್ಲಿ  ಕಾಣಬಹುದಾಗಿದೆ. ಸಮವಸ್ತ್ರದಲ್ಲಿದ್ದ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಒದ್ದೆಯಾಗದೆ ದಾಟಲು ಕುರ್ಚಿಗಳನ್ನು ಸಾಲಿನಲ್ಲಿ ನಿಲ್ಲಿಸಿ ಮತ್ತು ಅವುಗಳನ್ನು  ಹಿಡಿದಿರುವುದು ವೀಡಿಯೋದಲ್ಲಿ ಕಂಡು ಬಂದಿದೆ.

Join Whatsapp