ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ, ದಂತ ಚಿಕಿತ್ಸಾ ಶಿಬಿರ

Prasthutha|

ಮಂಗಳೂರು: ಅಡ್ಡೂರು ಫೈವ್ ಸ್ಟಾರ್ ಯಂಗ್ ಬಾಯ್ಸ್ ಹಾಗೂ ದೇರಳಕಟ್ಟೆ ಯೆನೆಪೋಯ ವಿಶ್ವವಿದ್ಯಾನಿಲಯ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಮರ್ಹೂಂ ಜನಾಬ್ ಹಾಜಿ A.N ಇಬ್ರಾಹಿಂ ಗರಡಿ ಮತ್ತು ಮರ್ಹೂಂ ಜನಾಬ್ T. ಸಯ್ಯದ್ ತೋಕೂರು ಸ್ಮರಣಾರ್ಥ ಬೃಹತ್ ಉಚಿತ ಆರೋಗ್ಯ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರ  ಇಲ್ಲಿನ ಬದ್ರಿಯಾ ಮದರಸದಲ್ಲಿ ನಡೆಯಿತು.

- Advertisement -

ಕಾರ್ಯಕ್ರಮವನ್ನು ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿ ಖತೀಬ್  ಸದಕತ್ತುಲ್ಲಾ ಫೈಝಿ ದುವಾ ಆಶೀರ್ವಾದದೊಂದಿಗೆ ಉದ್ಘಾಟಿಸಿದರು, ಸಭೆಯ ಅಧ್ಯಕ್ಷ ಸ್ಥಾನವನ್ನು ಹಬೀಬ್ ಕಟ್ಟ ಪುಣಿ ಆಲಂಕರಿಸಿದರು. ಕಾರ್ಯಕ್ರಮದಲ್ಲಿ ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಅಹ್ಮದ್ ಬಾವ ಅಂಗಡಿ ಮನೆ, ಮಾಜಿ ಶಾಸಕ ಮೊಯಿದಿನ್ ಬಾವ, ನಿಕಟಪೂರ್ವ ಜಿಲ್ಲಾ ಪಂಚಾಯತ್ ಸದಸ್ಯ U.P ಇಬ್ರಾಹಿಂ, ಗುರುಪುರ ಗ್ರಾಮ ಪಂಚಾಯತ್ ಸದಸ್ಯರಾದ ಆಶ್ರಫ್ ನಡುಗುಡ್ಡೆ, ಮನ್ಸೂರ್ ಟಿಬೆಟ್, ಸಾಹಿಕ್ ಪಾಂಡೆಲ್, A.K ಆಶ್ರಫ್, ಸಾಮಾಜಿಕ ಕಾರ್ಯಕರ್ತರಾದ ಅಬ್ದುಲ್ ರೆಹಮಾನ್ ಬಂಡಸಾಲೆ, ಅಡ್ಡೂರು ಬದ್ರಿಯಾ ಜುಮ್ಮಾ ಮಸೀದಿ ಉಪಾಧ್ಯಕ್ಷ ಝನುದ್ದೀನ್ ದೆಲ್ಮಾ, ಬದ್ರಿಯಾ ಮದರಸದ ಸಂಚಾಲಕರಾದ D.S ರಫೀಕ್, ಖ್ಯಾತ ಉದ್ಯಮಿ    ಇನಾಯತ್ ಆಲಿ, D.R E.K ಸಿದ್ದೀಕ್,  ಕರಾವಳಿ ಟೆಕ್ಸ್ ಟೈಲ್ಸ್ ಮತ್ತು ಫುಟ್ ವೇರ್ ಅಧ್ಯಕ್ಷ ಸಂತೋಷ್ ಕಾಮತ್, D.R ಜುನೈದ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಶಿಬಿರದಲ್ಲಿ 312 ಜನರು ಸದುಪಯೋಗ ಪಡೆದರು. ಕಾರ್ಯಕ್ರಮವನ್ನು ಸಂಸ್ಥೆಯ ಸದಸ್ಯ ಜಮಾಲ್ ನಿರೂಪಿಸಿದರು.

Join Whatsapp