ಮಣ್ಣಾರ್ ಕ್ಕಾಡ್ ಡಬಲ್ ಮರ್ಡರ್ ಕೇಸ್: ಮುಸ್ಲಿಂ ಲೀಗಿನ 25 ಕಾರ್ಯಕರ್ತರ ಅಪರಾಧ ಸಾಬೀತು | ನಾಳೆ ಶಿಕ್ಷೆ ಪ್ರಕಟ

Prasthutha|

ಪಾಲಕ್ಕಾಡ್: ಮಣ್ಣಾರ್ ಕ್ಕಾಡ್ ನ ಕಂಜಿರಪುಳದಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಮುಸ್ಲಿಂ ಲೀಗ್ ನ 25 ಕಾರ್ಯಕರ್ತರನ್ನು ಅಪರಾಧಿಗಳು ಎಂದು ಘೋಷಿಸಿರುವ ಪಾಲಕ್ಕಾಡ್ ತ್ವರಿತಗತಿ ನ್ಯಾಯಾಲಯ, ನಾಳೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದೆ.

- Advertisement -

2013ರ ನವೆಂಬರ್ 20ರಂದು ಕಲ್ಲಾಂಕುಝಿ ಪಲ್ಲತ್ ಮನೆಯಲ್ಲಿ ಸಹೋದರರಾದ ಕುಞಿ ಹಂಝಾ ಮತ್ತು ನೂರುದ್ದೀನ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅವರಿಬ್ಬರೂ ಎಪಿ ಸುನ್ನಿ ಕಾರ್ಯಕರ್ತರು ಮತ್ತು ಸಿಪಿಎಂ ಬೆಂಬಲಿಗರಾಗಿದ್ದು ಮಸೀದಿಯಲ್ಲಿ ಹಣ ಸಂಗ್ರಹದ ವಿವಾದವು ಕೊಲೆಗೆ ಕಾರಣವಾಗಿತ್ತು.

ಕಾಞಿರಪ್ಪುಝ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಚೋಳತ್ತಿಲ್ ಸಿದ್ದಿಕಿ  ಪ್ರಕರಣದ ಮೊದಲ ಆರೋಪಿಯಾಗಿದ್ದು ಪ್ರಕರಣದ ಎಲ್ಲಾ ಆರೋಪಿಗಳು ಮುಸ್ಲಿಂ ಲೀಗ್ ಕಾರ್ಯಕರ್ತರು ಮತ್ತು ಪಕ್ಷದೊಂದಿಗೆ ನಿಕಟ ಸಂಪರ್ಕ ಹೊಂದಿದವರು ಎನ್ನಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 90ಸಾಕ್ಷಿಗಳನ್ನು ಪರಿಶೀಲಿಸಿದ್ದು ಪ್ರಕರಣದ 25 ಅಪರಾಧಿಗಳಿಗೂ ನಾಳೆ ಶಿಕ್ಷೆ ಪ್ರಕಟವಾಗಲಿದೆ.



Join Whatsapp