ಮಣಿಪುರ ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿರುವ ಘಟನೆ ಪೈಶಾಚಿಕ, ಅತ್ಯಂತ ಖಂಡನೀಯ: WIM ಕಾಪು ಘಟಕ

Prasthutha|

ಉಡುಪಿ: ಮಣಿಪುರದಲ್ಲಿ ಗಲಭೆಗಳು ನಡೆಯುತ್ತಿದ್ದು ನೂರಾರು ಜನರು ಈಗಾಗಲೇ ಪ್ರಾಣ ಕಳೆದುಕೊಂಡಿರುತ್ತಾರೆ. ಸಾವಿರಾರು ಕುಟುಂಬಗಳು ಪ್ರಾಣಭಿಕ್ಷೆಗಾಗಿ ಮೊರೆಯಿಡುತ್ತಿದ್ದಾರೆ. ಅದರಲ್ಲೂ ಮಹಿಳೆಯರು ಹೆಚ್ಚು ದೌರ್ಜನ್ಯ ಕೊಳಪಡುತ್ತಿದ್ದಾರೆ ಎಂದು ವಿಮ್ ನ ಜಿಲ್ಲಾಧ್ಯಕ್ಷೆ ನಾಝೀಯ ನಶ್ರುಲ್ಲಾ ರವರು ಹೇಳಿದ್ದಾರೆ.

- Advertisement -

ಈ ಕುರಿತು ಪತ್ರಿಕ ಪ್ರಕಟಣೆ ಹೊರಡಿಸಿರುವ ಅವರು, ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ನಡೆಸಿ ಲೈಂಗಿಕ ಕಿರುಕುಳ ನೀಡಿ ಸಾಮೂಹಿಕ ಅತ್ಯಾಚಾರಗೈದಿರುವ ಘಟನೆಯು ಅತ್ಯಂತ ಘೋರ ಕೃತ್ಯವಾಗಿದೆ. ಸಂತ್ರಸ್ತೆಯೋರ್ವಳು ಕಾರ್ಗಿಲ್ ಯೋಧನ ಪತ್ನಿಯಾಗಿದ್ದು ಪ್ರಕರಣದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇಂತಹ ನೂರಾರು ಘಟನೆಗಳು ನಡೆದಿರುವುದರಿಂದ ಇಂಟರ್ನೆಟ್ ಬಂದ್ ಮಾಡಿದ್ದೇವೆ ಎಂದು ಮುಖ್ಯಮಂತ್ರಿಯ ಬೇಜವಾಬ್ದಾರಿಯ ನಿಷ್ಕರುಣ, ನಿಸ್ಸಂಕೋಚ ಹೇಳಿಕೆಯು ಅತ್ಯಾಚಾರವನ್ನು ರಾಜಕೀಯ ಅಸ್ತ್ರವಾಗಿ ಬಳಸಲು ಕರೆಯಿತ್ತ ಸಾವರ್ಕರ್ ಮನಸ್ಥಿತಿಯಿಂದ ಮಾತ್ರ ಬರಲು ಸಾಧ್ಯ ಘಟನೆಯಲ್ಲಿ ಪೋಲೀಸರ ನಿಷ್ಕ್ರಿಯತೆಯ ಕೂಡಾ ವರದಿಯಾಗಿದೆ.ವಾಸ್ತವದಲ್ಲಿ ಬೆತ್ತಲೆಯಾಗಿರುವುದು ಅಲ್ಲಿನ ಆಡಳಿತ ವ್ಯವಸ್ಥೆಯಾಗಿದೆ ಮತ್ತು ಇದು ಸರಕಾರಿ ಪ್ರಾಯೋಗಿಕ ಹತ್ಯಾಕಾಂಡವಾಗಿದೆ ಎಂದರು.

ದೇಶದ ಹೃದಯ ಭಾಗವಾಗಿರುವ ರಾಜಧಾನಿಯಲ್ಲಿ ಮಹಿಳಾ ಕ್ರೀಡಾಪಟುಗಳು ನ್ಯಾಯಕ್ಕಾಗಿ ಮೊರೆಯಿಡುತ್ತಿರಬೇಕಾದರೆ ಪ್ರಧಾನಿಯು ಮೌನವಹಿಸಿದ್ದರು. ಬಿಲ್ಕಿಸ್ ಬಾನು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೊಳಗಾದವರನ್ನು ‘ಸನ್ನಡತೆ’ ಹೆಸರಿನಲ್ಲಿ ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು. ದುಷ್ಕರ್ಮಿ ಗಳಿಗೆ ಇವು ಆಡಳಿತಾತ್ಮಕ ಧೈರ್ಯ ನೀಡುತ್ತದೆ. ತಲೆತಗ್ಗಿಸಬೇಕಾದ ಮಣಿಪುರದ ಈ ಘಟನೆಯಲ್ಲೂ ಕೂಡ ಪ್ರಧಾನಿಯವರು ನಿರ್ಭಾವುಕವಾಗಿ ವರ್ತಿಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜು ಆಗುತ್ತಿದೆ. ಮಹಿಳೆಯರಿಗೆ ಈ ದೇಶವು ಎಷ್ಟು ಅಸುರಕ್ಷಿತ ಎಂಬುದು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ ಎಂದರು.

- Advertisement -

ಆದ್ದರಿಂದ ಈ ಘಟನೆಯನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಅತಿ ಕಠಿಣವಾದ ಕ್ರಮವನ್ನು ಕೈಗೊಳ್ಳಬೇಕು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿರುವ ಅಲ್ಲಿನ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ನಡೆಸಬೇಕು.ಅಡೀ ಮಣಿಪುರದ ಹತ್ಯಾಕಾಂಡವನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ನಡೆಸಬೇಕು ಗ್ರಾಮ ಪಂಚಾಯತ್ ಸದಸ್ಯರಾದ ಸೌಲತ್ H M ತನ್ನ ಭಾಷಣದಲ್ಲಿ ಹೇಳಿದರು.


ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ WIM ನ ಪ್ರಧಾನ ಕಾರ್ಯದರ್ಶಿಯಾದ ಹಾಜಿರ, ವಿಮ್ ಕಾಪು ಘಟಕದ ಅಧ್ಯಕ್ಷೆ ಯಾದ ಪರ್ಜಾನ ,ಕಾಪು ಘಟಕದ ಪ್ರಧಾನ ಕಾರ್ಯದರ್ಶಿಯಾದ ನೌಶಿನ್ ಕಾಪು ,WIM ನ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಇವತ್ತಿನ ಕಾರ್ಯಕ್ರಮವನ್ನು ನಿಯಾನ ಪರ್ವೀನ್ ರವರು ನೆರವೇರಿಸಿಕೊಟ್ಟರು.

Join Whatsapp