ಮಂಗಳೂರು: ಮಸೀದಿಗಳಲ್ಲಿ ಸೂರ್ಯಗ್ರಹಣ ಪ್ರಯುಕ್ತ ವಿಶೇಷ ನಮಾಝ್

Prasthutha|

ಮಂಗಳೂರು: ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಮುಸ್ಲಿಮರು ಮಂಗಳವಾರ ಸಂಜೆ ಮಸೀದಿಗಳಲ್ಲಿ ವಿಶೇಷ ನಮಾಝ್ ನೆರವೇರಿಸಿದರು.

- Advertisement -


ಸಂಜೆ 5.15ರಿಂದ 5.45ರವರೆಗೆ ನಮಾಝ್ ನಡೆದಿದ್ದು, ನೂರಾರು ಮುಸ್ಲಿಮರು ಇದರಲ್ಲಿ ಭಾಗವಹಿಸಿದ್ದರು.


ಮಂಗಳೂರಿನ ಇಬ್ರಾಹೀಂ ಖಲೀಲ್ ಮಸ್ಜಿದ್, ಝೀನತ್ ಭಕ್ಷ್ ಮಸೀದಿ, ಪೂಂಜಾಲಕಟ್ಟೆಯ ಬದ್ರಿಯಾ ಜುಮಾ ಮಸೀದಿ ಸೇರಿದಂತೆ ಜಿಲ್ಲೆಯ ಹಲವು ಮಸೀದಿಗಳಲ್ಲಿ ವಿಶೇಷ ನಮಾಝ್ ಮತ್ತು ಖುತ್ಬಾ ನಿರ್ವಹಿಸಲಾಯಿತು.

- Advertisement -

ಇಬ್ರಾಹಿಂ ಖಲೀಲ್ ಮಸೀದಿಯಲ್ಲಿ ಸಂಜೆ ಗಂಟೆ 5:15 ಕ್ಕೆ ಸಮೂಹಿಕ ನಮಾಝ್ ನಿರ್ವಹಿಸಲಾಯಿತು. ನಮಾಝ್ ನ ನೇತೃತ್ವವನ್ನು ಮೌಲವಿ ಅಶ್ರಫ್ ರವರು ನಿರ್ವಹಿಸಿದರು ಎಂದು ಮಸೀದಿಯ ಕಾರ್ಯದರ್ಶಿ ಅಹ್ಮದ್ ಅನ್ಸಾರ್ ತಿಳಿಸಿದರು.



Join Whatsapp