ಮಂಗಳೂರು ದಕ್ಷಿಣ ಜೆಡಿಎಸ್ ಅಭ್ಯರ್ಥಿ ಡಾ.‌ಸುಮತಿ ಹೆಗ್ಡೆ ಮನೆ ಮನೆ ತೆರಳಿ ಬಿರುಸಿನ ಪ್ರಚಾರ

Prasthutha|

ಮಂಗಳೂರು: ಇಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ‌ ಜೆಡಿಎಸ್ ಅಭ್ಯರ್ಥಿ  ಸುಮತಿ ಹೆಗ್ಡೆಯವರು  ಮಂಗಳೂರು ನಗರದ ಅತ್ತಾವರ ಹಾಗೂ ಹಲವು ಕಡೆ ಮನೆ ಮನೆಗೆ  ತೆರಲಿ ಬಿರುಸಿನ ಮತ ಯಾಚನೆ ಮಾಡಿದರು‌.

- Advertisement -

 ಈ‌ ಸಂಧರ್ಭ ಜೆಡಿಎಸ್ ರಾಜ್ಯ ಮೀನುಗಾರಿಕೆ ಅದ್ಯಕ್ಷ ರತ್ನಾಕರ್ ಸುವರ್ಣ, ರಾಜ್ಯ ಸಂಘಟಣಾ ಕಾರ್ಯದರ್ಶಿ ಝಮೀರ್ ಶಾ, ಮಾಜಿ ರಾಜ್ಯ ಯುವ ಜನತಾದಳ ಕಾರ್ಯದರ್ಶಿ ಶ್ರೀನಾಥ್ ರೈ, ಮಹಿಳಾ ರಾಜ್ಯ ಕಾರ್ಯದರ್ಶಿ ಶ್ರೀ ಮಣಿ ಆರ್ ಶೆಟ್ಟಿ, ದಿನೇಶ್ ಮೈಕಲ್ ಪಯಿಸ್, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಉಷಾ ಟೀಚರ್  , ಪ್ರಿಯಾ ಸಾಲಿಯನ್,  ಅಲ್ತಾಫ್ ತುಂಬೆ , ಅನ್ಸಾರ್ , ಲತೀಫ್  ಶಿವಭಾಗ್, ಕವಿತಾ ,  ಹಾಗೂ ಹಲವಾರು ಜೆಡಿಎಸ್ ಕಾರ್ಯಕರ್ತರು  ಉಪಸ್ಥಿತರಿದ್ದರು.

 ‌‌‌‌ಮತಯಾಚೆನೆ ಸಂಧರ್ಭ ಸಾರ್ವಜನಿಕರಿಂದ  ಉತ್ತಮ ಸ್ಪಂದನೆ ದೊರಕಿತ್ತಿದ್ದು, ಪಕ್ಷ‌ದ ಅಭ್ಯರ್ಥಿ ಕ್ಷೇತ್ರದ ಮತದಾರರ ಅಹವಾಲುಗಳನ್ನು ಸ್ಪೀಕರಿಸಿ , ಗೆದ್ದು ಬಂದರೆ ಪರಿಹರಿಸುವ ಭರವಸೆ ನೀಡಿದರು .‌ಮತಯಾಚನೆಯ ಸಂಧರ್ಭ ಸಾರ್ವಜನಿಕರು ಈ‌ ಬಾರಿ ಬದಲಾವಣೆ ಬಯಸಿ, ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ದೂರ ಇಡುವ ಬಗ್ಗೆ ತಿಳಿಸಿದ್ದು ಜೆಡಿಎಸ್ ಪಕ್ಷಕ್ಕೆ ಸಕಾರಾತ್ಮಕವಾದ ಸ್ಪಂದನೆ ದೊರಕುತ್ತಿದೆ.

- Advertisement -

Join Whatsapp