ಮಂಗಳೂರು: ಹತ್ಯೆಯಾದ ಜಲೀಲ್ ನಿವಾಸಕ್ಕೆ SDPI ರಾಜ್ಯ ನಾಯಕರ ಭೇಟಿ

Prasthutha|

ಸುರತ್ಕಲ್: ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಗೀಡಾದ ಸುರತ್ಕಲ್ ಕೃಷ್ಣಾಪುರ ನಿವಾಸಿ ಜಲೀಲ್ ಅವರ ನಿವಾಸಕ್ಕೆ SDPI ರಾಜ್ಯ ನಾಯಕರ ನಿಯೋಗ ಶುಕ್ರವಾರ ಭೇಟಿ ನೀಡಿ ಸಾಂತ್ವನ ಹೇಳಿತು.

- Advertisement -

ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ನಿಯೋಗ, ಜಲೀಲ್ ಅವರ ಮರಣದಿಂದ ನಮಗೂ ದುಃಖವಾಗಿದೆ. ಆರೋಪಿಗಳ ವಿರುದ್ಧ ಕುಟುಂಬ ನಡೆಸುತ್ತಿರುವ ಕಾನೂನು ಹೋರಾಟಕ್ಕೆ ಪಕ್ಷ ಕೂಡ ಬೆಂಬಲ ನೀಡಲಿದೆ, ಯಾವುದೇ ಕಾರಣಕ್ಕೂ ಎದೆಗುಂದದೆ ಹೋರಾಟ ಮುಂದುವರಿಸಬೇಕು. ಈ ಕುಟುಂಬದೊಂದಿಗೆ ಎಸ್’ಡಿಪಿಐ ಯಾವತ್ತೂ ಇರಲಿದೆ ಎಂದು ಭರವಸೆ ನೀಡಿದೆ.

ನಿಯೋಗದಲ್ಲಿ ಎಸ್’ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಸ್ಕರ್ ಪ್ರಸಾದ್, ಅಶ್ರಫ್ ಮಾಚಾರ್, ರಾಜ್ಯ ಸನಿತಿ ಸದಸ್ಯ ರಿಯಾಜ್ ಕಡಂಬು, ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೊಕಟ್ಟೆ, ಮಂಗಳೂರು ದಕ್ಷಿಣ ವಿಧಾಸಸಭಾ ಕ್ಷೇತ ಸಮಿತಿಯ ಅಧ್ಯಕ್ಷರಾದ ಅಕ್ಬರ್ ಕುದ್ರೋಳಿ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಜೊತೆ ಕಾರ್ಯದರ್ಶಿಅಝರ್ ಚೊಕ್ಕಬೆಟ್ಟು ಹಾಗು ಪಕ್ಷದ ಸ್ಥಳೀಯರು ಮುಖಂಡರು ಉಪಸ್ಥಿತಿ ಇದ್ದರು.

Join Whatsapp