ಮಂಗಳೂರು: ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯನ ಮೇಲೆ ಬಿಜೆಪಿ ಮುಖಂಡರಿಂದ ಭೀಕರ ಹಲ್ಲೆ!

Prasthutha|

ಮಂಗಳೂರು: ಕಾಂಗ್ರೆಸ್ ಬೆಂಬಲಿತ ಪಂಚಾಯತ್ ಸದಸ್ಯನ ಮೇಲೆ ಬಿಜೆಪಿ ಮುಖಂಡರು ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

- Advertisement -

ಪಡು ಪೆರೆರಾ ಪಂಚಾಯತ್ ಸದಸ್ಯ ನೂರ್ ಅಹ್ಮದ್ ಮೇಲೆ ರಾಡ್‌ ನಿಂದ ಹಲ್ಲೆ ನಡೆಸಲಾಗಿದೆ.

ಬಿಜೆಪಿ ಮುಖಂಡ ರಾಜೇಶ್ ಸಾಲ್ಯಾನ್, ಕಾಂಟ್ರಾಕ್ಟರ್ ರಾಘವೇಂದ್ರ ಆಚಾರಿ ಎಂಬವರು ಹಲ್ಲೆ ನಡೆಸಿದ್ದು, ಬಳಿಕ‌ ಕೊಲೆ ಬೆದರಿಕೆ ಹಾಕಿರುವುದಾಗಿ ಸಂತ್ರಸ್ತ ಆರೋಪ ಮಾಡಿದ್ದಾರೆ.

- Advertisement -

ಹಲ್ಲೆಗೊಳಾಗಾದ ಪಂಚಾಯತ್ ಸದಸ್ಯ ನೂರ್ ಅಹ್ಮದ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



Join Whatsapp