ಮಂಗಳೂರು: ಕಣ್ಣೂರಿನಲ್ಲಿ ಮಣ್ಣು ಕುಸಿದು ಮನೆಗೆ ಹಾನಿ

Prasthutha|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಕಣ್ಣೂರು ಬಲ್ಲೂರು ಗುಡ್ಡೆ ಎಂಬ ಪ್ರದೇಶದಲ್ಲಿ ಮಣ್ಣು ಕುಸಿದು ಮನೆಗೆ ಹಾನಿಯಾಗಿದೆ.

- Advertisement -


ಕೆಲ ದಿನಗಳಿಂದ ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೀರು ಹರಿಯಲು ಸ್ಥಳ ಇಲ್ಲದೆ  ಪಾಯದೊಳಗೆ ನೀರು ಹರಿದಿದ್ದರಿಂದ ಮಣ್ಣು ಸಡಿಲಗೊಂಡಿತ್ತು. ಅದರಿಂದಾಗಿ ಬುಧವಾರ ರಾತ್ರಿ ಏಕಾಏಕಿ  ಮಣ್ಣು ಕುಸಿದು ಬಿದ್ದಿದೆ. ಪರಿಣಾಮ ಉಮರ್ ಅವರ ಮನೆ ಹಾನಿಯಾಗಿದೆ.

ರಾತ್ರಿ 12ರ ಸುಮಾರಿಗೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ನಿವಾಸಿಗಳಿಗೆ ಯಾವುದೇ ತೊಂದರೆಯಾಗಿಲ್ಲ. ಜಿಲ್ಲಾ ಆಡಳಿತ ಇದಕ್ಕೆ ಬೇಕಾದ ಸೂಕ್ತ ಕ್ರಮ ಕೈಕೊಳ್ಳಬೇಕಾಗಿ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.



Join Whatsapp