ಮಂಗಳೂರು: 14ನೇ ಮಹಡಿಯಿಂದ ಬಿದ್ದು ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

Prasthutha|

ಮಂಗಳೂರು: ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ 14ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಬೆಳಗ್ಗಿನ ಜಾವ ನಡೆದಿದೆ.

- Advertisement -


ನಂತೂರಿನ ಎಸ್ ಕೆಎಸ್ ಪ್ಲಾನೆಟ್ ನಿವಾಸಿ ಮೊಬೈಲ್ ಕೇರ್ ಸಲೀಂ ಹಾಗೂ ಬುಶುರಾ ದಂಪತಿ ಪುತ್ರ ಮುಹಮ್ಮದ್ ಶಮಾಲ್ (22) ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ಶಮಾಲ್, ರಜೆಯ ಹಿನ್ನೆಲೆಯಲ್ಲಿ ವಾರದ ಹಿಂದೆ ಮನೆಗೆ ಬಂದಿದ್ದ. ಗುರುವಾರ ಬೆಳಗ್ಗಿನ ಜಾವ ರಂಝಾನ್ ಉಪವಾಸದ ಸಹರಿಗಾಗಿ ಎದ್ದ ಸಮಯದಲ್ಲಿ ಆಕಸ್ಮಿಕವಾಗಿ 14ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ತಕ್ಷಣ ಎ.ಜೆ.ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅಷ್ಟರಲ್ಲೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.


ಸಲೀಂ ಅವರ ಮೂವರು ಪುತ್ರರಲ್ಲಿ ಶಮಾಲ್ ಮೊದಲನೆಯವ ಎಂದು ತಿಳಿದುಬಂದಿದೆ. ಬೋಳಾರ್ ಜುಮಾ ಮಸೀದಿ ಖಬರಸ್ತಾನದಲ್ಲಿ ಗುರುವಾರ ಮಧ್ಯಾಹ್ನ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಪುತ್ರನ ಅಗಲಿಕೆಯಿಂದ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.



Join Whatsapp