ಮಂಗಳೂರು: ನಾಗನ ಕಟ್ಟೆ ಧ್ವಸಗೊಳಿಸಿದ ದುಷ್ಕರ್ಮಿಗಳು

Prasthutha|

ಮಂಗಳೂರು: ನಾಗನ ಕಟ್ಟೆಗೆ ದುಷ್ಕರ್ಮಿಗಳು ಧ್ವಂಸಗೊಳಿಸಿರುವ ಘಟನೆ ಇಂದು ಬೆಳಗ್ಗೆ ಕೂಳೂರಿನಲ್ಲಿ ನಡೆದಿದೆ.

- Advertisement -

ಬುಧವಾರ ಸಂಜೆ ಕೆಲವು ಮಂದಿ ಸ್ಥಳೀಯರು ಮಾಮೂಲಿನಂತೆ ಕೈ ಮುಗಿದು ಹೋಗಿದ್ದರು. ಆದರೆ ಇಂದು ಬೆಳಗ್ಗೆ ಬಂದು ನೋಡಿದಾಗ ಹಾನಿ ಮಾಡಿದ ಘಟನೆ ಗೊತ್ತಾಗಿದೆ. ಸ್ಥಳದಲ್ಲಿ ಪಿಕ್ಕಾಸು, ಕತ್ತಿ ಮೊದಲಾದ ಪರಿಕರಗಳು ಪತ್ತೆಯಾಗಿದೆ. 19 ನಾಗನ ಕಲ್ಲಿನ ಪೈಕಿ 6 ನಾಪತ್ತೆಯಾಗಿದೆ. ಒಂದನ್ನು ಪುಡಿ ಮಾಡಲಾಗಿದೆ. 

ಈ ಬಗ್ಗೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Join Whatsapp