ಪಠ್ಯ ಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣ ಗುರು ಪಾಠ ಕಿತ್ತು ಹಾಕಿರುವುದಕ್ಕೆ ಬಿಲ್ಲವ ಸಂಘ ಖಂಡನೆ

Prasthutha|

ಮಂಗಳೂರು: ಹೈಸ್ಕೂಲ್ ಪಠ್ಯಪುಸ್ತಕದಿಂದ ದಾರ್ಶನಿಕ ಬ್ರಹ್ಮ ಶ್ರೀ ನಾಪರಾಯಣ ಗುರು ಅವರ ಕುರಿತಾದ ಪಾಠವನ್ನು ಏಕಾಎಕಿ ಕಿತ್ತು ಹಾಕಿರುವ ರಾಜ್ಯ ಸರಕಾರದ ಕ್ರಮವನ್ನು ಮಂಗಳೂರು ತಾಲೂಕು ಬಿಲ್ಲವ ಸಂಘ ಖಂಡಿಸಿದೆ.

- Advertisement -

ಬಿಜೆಪಿ ಸರಕಾರದ ಈ ಕ್ರಮದಿಂದ ನಾರಾಯಣ ಗುರುಗಳಿಗೆ ಮತ್ತೊಮ್ಮೆ ಅವಮಾನ ಮಾಡಿದೆ. ಇದು ಅತ್ಯಂತ ಖಂಡನೀಯ ಎಂದು ಮಂಗಳೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಜಿತೇಂದ್ರ ಜೆ. ಸುವರ್ಣ ಅವರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಜಗತ್ತಿಗೆ ಒಂದೇ ದೇವರು ಒಂದೇ ಧರ್ಮ ಒಂದೇ ಜಾತಿ ಸಂದೇಶ ನೀಡಿದ ಹಿಂದೂ ಸಮಾಜದ ಮಹಾನ್ ಸುಧಾರಕ ನಾರಾಯಣ ಗುರುಗಳ ಪಾಠವನ್ನು ತೆಗೆದು ಹಾಕಿ ಇನ್ಯಾರ ಪಾಠವನ್ನು ಹೇಳಲು ಸರಕಾರ ಹೊರಟಿದೆ ಎಂದವರು ಪ್ರಶ್ನಿಸಿದ್ದಾರೆ.

- Advertisement -

ದಾರ್ಶನಿಕರ ಪಾಠವನ್ನು ಕಿತ್ತುಹಾಕುವ ಮೂಲಕ ಸರಕಾರ ಯಾವ ಸಂದೇಶ ನೀಡಲು ಹೊರಟಿದೆ ಎಂದು ಆಡಳಿತ ಪಕ್ಷದ ಮುಖಂಡರು ಸ್ಪಷ್ಟಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.



Join Whatsapp