ಮಂಗಳೂರು | ಪೇರೆಂಟ್ಸ್ ಮೀಟಿಂಗ್ ನಲ್ಲಿ ಶಿಕ್ಷಕಿ ಮೇಲೆ ಹಲ್ಲೆ ಆರೋಪ: ಯುವಕ ವಶಕ್ಕೆ

Prasthutha|

- Advertisement -

ಸುರತ್ಕಲ್: ಕಾಟಿಪಳ್ಳ 2ನೇ ಬ್ಲಾಕ್ ನ ಖಾಸಗಿ ಶಾಲೆಯ ಪೋಷಕರ ಸಭೆಯಲ್ಲಿ ಶಿಕ್ಷಕಿ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮುಹಮ್ಮದ್ ಹನೀಫ್ ಹಲ್ಲೆ ಮಾಡಿದ ಆರೋಪಿ.

- Advertisement -

ಶಿಕ್ಷಕಿ ಚಂದ್ರಕಲಾ ಅವರು ಪರಿಚಯದ ನೆಲೆಯಲ್ಲಿ ಹನೀಫ್ ನ ಪತ್ನಿಗೆ ಸಾಲ ನೀಡಿದ್ದು ಅದನ್ನು ಹಿಂತಿರುಗಿಸಿರಲಿಲ್ಲ. ಹಣದ ಅವಶ್ಯಕತೆ ಇದ್ದುದರಿಂದ ಅದನ್ನು ಹಿಂತಿರುಗಿಸುವಂತೆ ಚಂದ್ರಕಲಾ ಕೇಳುತ್ತಿದ್ದರು. ಹನೀಫ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ಎರಡು ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದ ಎಂದು ತಿಳಿದು ಬಂದಿದೆ.

ಶಾಲೆಯಲ್ಲಿ ಪೋಷಕರ ಸಭೆ ವೇಳೆ ಚಂದ್ರಕಲಾ ಹಾಗೂ ಹನೀಫ್ ಪತ್ನಿಯ ಮಧ್ಯೆ ಜಗಳ ನಡೆದಿದ್ದು ಚಂದ್ರಕಲಾ ಮಾತಿನ ಭರದಲ್ಲಿ ಹನೀಫ್ ನ ಪುಟ್ಟ ಮಗುವಿನ ಬಗ್ಗೆ ಮಾತಾಡಿದರೆಂಬ ಕೋಪದಲ್ಲಿ ಏಕಾಏಕಿ ಶಾಲಾ ಕೊಠಡಿಯಲ್ಲೇ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಚಂದ್ರಕಲಾ ಅವರ ಕೈಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Join Whatsapp