ಮಂಗಳೂರು | ಚಿನ್ನದ ಮಳಿಗೆಗೆ ನುಗ್ಗಿ ಮುಸ್ಲಿಮ್ ಯುವಕನಿಗೆ ಹಲ್ಲೆ ಪ್ರಕರಣ: ನಾಲ್ಕು ಮಂದಿ ಸಂಘಪರಿವಾರದ ಕಾರ್ಯಕರ್ತರ ಬಂಧನ

Prasthutha|

ಮಂಗಳೂರು: ನಗರದ ಚಿನ್ನದಂಗಡಿಯೊಂದಕ್ಕೆ ನುಗ್ಗಿ ಅನೈತಿಕ ಪೊಲೀಸ್ ಗಿರಿ ನಡೆಸಿದ ಸಂಘಪರಿವಾರದ ನಾಲ್ವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಬಂಧಿತ ಆರೋಪಿಗಳನ್ನು ಶಿಬಿನ್, ಗಣೇಶ್, ಪ್ರಕಾಶ್, ಚೇತನ್ ಎಂದು ಗುರುತಿಸಲಾಗಿದೆ. ನಗರದ ಹೆಸರಾಂತ ಜ್ಯುವೆಲ್ಲರಿಯಲ್ಲಿ ಕೆಲಸಕ್ಕಿದ್ದ ಮುಸ್ಲಿಂ ಯುವಕ ತನ್ನ ಸಹೋದ್ಯೋಗಿಯಾಗಿರುವ ಅನ್ಯಮತೀಯ ಯುವತಿಯ ಜೊತೆ ಮಾತನಾಡುತ್ತಿದ್ದ ಎಂದು ಆರೋಪಿಸಿ ಹಲ್ಲೆ ನಡೆಸಿದ್ದಾಗಿ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಘಟನೆಯ ದಿನ ರಜೆಯಲ್ಲಿದ್ದ ಯುವಕನನ್ನು ಬೇರೊಂದು ಸ್ಥಳದಲ್ಲಿ ಗೂಂಡಾಗಳು ಬೇಕಾಬಿಟ್ಟಿಯಾಗಿ ಥಳಿಸಿದ್ದಾರೆ. ನಂತರ ಯುವತಿಯ ಮನೆಯವರ ಸಹಿತ ಬಂದು ಮಳಿಗೆಗೆ ನುಗ್ಗಿದ ಸಂಘಪರಿವಾರದ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದ್ದಲ್ಲದೆ ಮಳಿಗೆಯನ್ನು ಸುಡುವುದಾಗಿಯೂ ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp