ಮಂಗಳೂರು: ಅಡ್ಯಾರ್ ಪದವು ರಿಕ್ಷಾ ಚಾಲಕನ ಕೊಲೆಗೆ ಯತ್ನಿಸಿದ ಐವರ ಬಂಧನ

Prasthutha|

ಮಂಗಳೂರು: ಅಡ್ಯಾರ್ ಪದವಿನಲ್ಲಿ ರಿಕ್ಷಾ ಚಾಲಕನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಐವರನ್ನು ಬಂಧಿಸಿದ್ದಾರೆ.

- Advertisement -

ಬಂಧಿತ ಆರೋಪಿಗಳನ್ನು ಬಂಡಂತಿಲ ಕಾಪೆಟ್ಟು ಸೈಟ್ ನ ಗಣೇಶ್(23), ಬಂಟಕಟ್ಟಾ ಪಡು ನಿವಾಸಿ ಚೇತನ್ ಕುಮಾರ್(21), ಕಟ್ಟಿಂಜ ಸೈಟ್ ನ ಕೀರ್ತಿ ರಾಜ್(23), ನೀರು ಮಾರ್ಗ ರಂಗಪಾದೆಯ ಸುವೀತ್(19), ಬೊಂಡಂತಿಲದ ಪರೀಕ್ಷಿತ್(20) ಎಂದು ಗುರುತಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಲಂ 143, 147, 148, 341, 427, 324, 326, 307 ಮತ್ತು 149 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.   

- Advertisement -


ಅಡ್ಯಾರ್ ಪದವು ನಿವಾಸಿಯಾದ ಮುಹಮ್ಮದ್ ರಿಯಾಝ್ ಎಂಬವರು ಕಾರಿನಲ್ಲಿ ತಮ್ಮ ಮನೆಯ ಕಡೆಗೆ ತೆರಳುತ್ತಿದ್ದಾಗ 8ಜನರು ಸೇರಿಕೊಂಡು ವಾಹನವನ್ನು ಅಡ್ಡಗಟ್ಟಿ ಕೊಲೆ ಯತ್ನ ನಡೆಸಿದ್ದರು.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp