ಮಂಗಳೂರು: ಅಡ್ಯಾರ್ ಪದವು ರಿಕ್ಷಾ ಚಾಲಕನ ಕೊಲೆಗೆ ಯತ್ನಿಸಿದ ಐವರ ಬಂಧನ
Prasthutha: December 14, 2021

ಮಂಗಳೂರು: ಅಡ್ಯಾರ್ ಪದವಿನಲ್ಲಿ ರಿಕ್ಷಾ ಚಾಲಕನ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಡಂತಿಲ ಕಾಪೆಟ್ಟು ಸೈಟ್ ನ ಗಣೇಶ್(23), ಬಂಟಕಟ್ಟಾ ಪಡು ನಿವಾಸಿ ಚೇತನ್ ಕುಮಾರ್(21), ಕಟ್ಟಿಂಜ ಸೈಟ್ ನ ಕೀರ್ತಿ ರಾಜ್(23), ನೀರು ಮಾರ್ಗ ರಂಗಪಾದೆಯ ಸುವೀತ್(19), ಬೊಂಡಂತಿಲದ ಪರೀಕ್ಷಿತ್(20) ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಕಲಂ 143, 147, 148, 341, 427, 324, 326, 307 ಮತ್ತು 149 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
ಅಡ್ಯಾರ್ ಪದವು ನಿವಾಸಿಯಾದ ಮುಹಮ್ಮದ್ ರಿಯಾಝ್ ಎಂಬವರು ಕಾರಿನಲ್ಲಿ ತಮ್ಮ ಮನೆಯ ಕಡೆಗೆ ತೆರಳುತ್ತಿದ್ದಾಗ 8ಜನರು ಸೇರಿಕೊಂಡು ವಾಹನವನ್ನು ಅಡ್ಡಗಟ್ಟಿ ಕೊಲೆ ಯತ್ನ ನಡೆಸಿದ್ದರು.
ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News
