ಮಂಗಳೂರು | ನ್ಯಾಯ ಬೆಲೆ ಅಂಗಡಿ ಮಾಲೀಕನಿಂದ ಧರ್ಮನಿಂದನೆ, ಹಲ್ಲೆ ಆರೋಪ: ದೂರು ದಾಖಲು

Prasthutha|

ಮಂಗಳೂರು: ಅಕ್ಕಿ ತರಲು ಹೋಗಿದ್ದ ಮುಸ್ಲಿಮ್ ವ್ಯಕ್ತಿಯೊಬ್ಬರನ್ನು ನ್ಯಾಯ ಬೆಲೆ ಅಂಗಡಿ ಮಾಲೀಕ ಧರ್ಮ ನಿಂದನೆ ಮಾಡಿ ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ. ಈ ಸಂಬಂಧ ನಗರದ ಬೋಳಾರ್ ನಿವಾಸಿ ಮೊಹಮ್ಮದ್ ಮೆಹರಾಜ್ ಎಂಬವರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -


ದಿನಾಂಕ 16-01-2024ರ ಮಂಗಳವಾರದಂದು ಪಾಂಡೇಶ್ವರ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ನ್ಯಾಯ ಬೆಲೆ ಅಂಗಡಿಗೆ ಅಕ್ಕಿ ತರಲು ತೆರಳಿದ್ದ ವೇಳೆ ಅಂಗಡಿ ಮಾಲೀಕ ಬಿ. ಕೇಶವ್ ಮೂರ್ತಿ ಅವರು ತನ್ನ ಧರ್ಮವನ್ನು ಅವಹೇಳನ ಮಾಡಿ, ಅವಾಚ್ಯವಾಗಿ ನಿಂದಿಸಿ ಕುರ್ಚಿಯಲ್ಲಿ ಹಲ್ಲೆಗೆ ಯತ್ನಿಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
`ಏಯ್ ಬ್ಯಾರಿ … ಮಗ, ನಿನ್ನ ಬಿಪಿಎಲ್ ಕಾರ್ಡ್ ರದ್ದು ಮಾಡುತ್ತೇನೆ ಎಂದು ನನಗೆ ಮತ್ತು ನನ್ನ ಪತ್ನಿಗೆ ಧಮ್ಕಿ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.


ಮೆಹರಾಜ್ ಅವರು ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ದೂರು ಸ್ವೀಕರಿಸಿದ್ದು, ಈವರೆಗೆ ಎಫ್ ಐಆರ್ ದಾಖಲಿಸಿಲ್ಲ.

- Advertisement -


ನ್ಯಾಯ ಬೆಲೆ ಅಂಗಡಿ ಮಾಲೀಕ ಬಿ. ಕೇಶವ್ ಮೂರ್ತಿ ಅವರು ಸಂಘಪರಿವಾರದ ಹಿನ್ನೆಲೆ ಹೊಂದಿದ್ದು, ಅಂಗಡಿಗೆ ಬರುವ ಬಹುತೇಕ ಮುಸ್ಲಿಮರ ಜೊತೆ ಹೀಗೆ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ.



Join Whatsapp